ಪುತ್ತೂರು : ದರ್ಬೆ ವಿನಾಯಕ ನಗರದಲ್ಲಿರುವ ಭಾಲಾವಲಿಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘದ ಶತಮಾನೋತ್ಸವದ ಶತ ಕಾರ್ಯಕ್ರಮಗಳ ಅಂಗವಾಗಿ ನಡೆದ ೫ನೆಯ ಕಾರ್ಯಕ್ರಮ ಬ್ಯುಟೀಶೀಯನ್ ತರಬೇತಿಯ ಸಮಾರೋಪ ಸಮಾರಂಭ ಎ.30ರಂದು ಸಂಘದ ಸಚ್ಚಿದಾನಂದ ಸಭಾಭವನದಲ್ಲಿ ಜರುಗಿತು. ಶಿಬಿರಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿ ಅತ್ಯಲ್ಪ ಸಮಯದಲ್ಲಿ ಸ್ವಯಂ ಪ್ರಸಾಧನ ತರಬೇತಿಯನ್ನು ಪಡೆದು ಸ್ವಾವಲಂಬಿಯಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಇದೊಂದು ಉತ್ತಮ ಅವಕಾಶ ಎಂದರು. ತರಬೇತಿ ನೀಡಿದ ಮಾಳವಿಕಾ ಹೋಂ ಬ್ಯೂಟಿಪಾರ್ಲರ್ ಮಾಲಕಿ ಮಲ್ಲಿಕಾ ಕುಕ್ಕಾಡಿಯವರನ್ನು ಅಭಿನಂದಿಸಲಾಯಿತು. ಭಾಗವಹಿಸಿದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು.