ಕೊಂಬೆಟ್ಟು ಶಿವ ನಿಲಯ ಮನೆಯಲ್ಲಿ ಕಲ್ಲುರ್ಟಿ, ಕೊರತಿ, ಅಣ್ಣಪ್ಪ ಪಂಜುರ್ಲಿ ದೈವಗಳ ನೇಮೋತ್ಸವ

0

 

ಪುತ್ತೂರು : ಕೊಂಬೆಟ್ಟು ಶ್ರೀಮಹಾಲಿಂಗೇಶ್ವರ ಐಟಿಐ ಬಳಿಯ ಶಿವ ನಿಲಯ ಮನೆಯಲ್ಲಿ ಎ.೨೯ರಂದು ವೇ.ಮೂ.ಕರಾಯ ಹರಿಪ್ರಸಾದ್ ವೈಲಾಯರ ಮಾರ್ಗದರ್ಶನದಲ್ಲಿ ಕಲ್ಲುರ್ಟಿ, ಕೊರತಿ, ಅಣ್ಣಪ್ಪ ಪಂಜುರ್ಲಿ ದೈವಗಳ ನೇಮೋತ್ಸವ ನಡೆಯಿತು. ಸಂಜೆ ೬ಕ್ಕೆ ಭಂಡಾರ ತೆಗೆದು ರಾತ್ರಿ ೮ರಿಂದ ಅನ್ನಸಂತರ್ಪಣೆ, ನೇಮೋತ್ಸವ ನಡೆಯಿತು.

 

 

ಶಾಸಕ ಸಂಜೀವ ಮಠಂದೂರು, ಕೊಟ್ಟಿಬೆಟ್ಟು ಏಳ್ನಾಡುಗುತ್ತು ರಾಧಾಕೃಷ್ಣ ನಾಕ್, ನಗರಸಭಾ ಸದಸ್ಯರಾದ ಪಿ.ಜಿ.ಜಗನ್ನೀವಾಸ ರಾವ್, ಕಾರ್ಜಾಲುಗುತ್ತು ಜಯಕರ ಜೈನ್, ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಮನೋಹರ ಕೆ.ವಿ., ಹಿರಿಯ ವಕೀಲ ಮಹೇಶ್ ಕಜೆ, ವಕೀಲರುಗಳಾದ ಸೂರ್ಯನಾರಾಯಣ ಎನ್.ಕೆ., ಗಿರೀಶ್ ಮಳಿ, ಕಕ್ವೆ ಕೃಷ್ಣಪ್ಪ ಗೌಡ, ಹಿರಿಯರಾದ ಕಿಟ್ಟಣ ಗೌಡ ಬಪ್ಪಳಿಗೆ, ಗೋಪಾಲ ನಾಕ್ ಮತ್ತು ಶಶಿಕಲಾ ನಾಕ್ ದಂಪತಿ, ಪುತ್ತೂರು ಸ್ನೇಹ ಸಿಲ್ಕ್ ಮಾಲಕ ಸತೀಶ್ ಮತ್ತು ಸಿಬ್ಬಂದಿಗಳು, ವಕೀಲರು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಮನೆಯವರಾದ ಉದಯಶಂಕರ್ ನಾಕ್, ಉಮಾ ಯು. ನಾಕ್, ಸೇರಿದಂತೆ ಕುಟುಂಬಸ್ಥರು, ಬಂಧುಮಿತ್ರರು ಉಪಸ್ಥಿತರಿದ್ದರು. ವಕೀಲ ತೇಜಸ್ ನಾಕ್ ಮಧ್ಯಸ್ಥಿಕೆ ವಹಿಸಿದ್ದರು. ಶ್ರೀಮಹಾಲಿಂಗೇಶ್ವರ ಯುವಕ ಮಂಡಲದ ಸದಸ್ಯರು ಸಹಕರಿಸಿದರು.

LEAVE A REPLY

Please enter your comment!
Please enter your name here