ಕಳಾರ ಅಕ್ರಮ ಕಸಾಯಿಖಾನೆಗೆ ದಾಳಿ ಕುತ್ತಿಗೆ ಕಡಿದಿರುವ ಜಾನುವಾರು, ಕಸಾಯಿಖಾನೆಗೆ ತಂದಿರುವ ಜಾನುವಾರು ಪತ್ತೆ

0

  • ಪೊಲೀಸರ ಜತೆ ಮಾತಿನ ಚಕಮಕಿಗಿಳಿದಿರುವ ಸ್ಥಳೀಯರು!

 

 

ಕಡಬ: ಇಲ್ಲಿನ ಕಳಾರ ಸಮೀಪದ ತಿಮರಡ್ಡ ಎಂಬಲ್ಲಿ ಮಾಂಸಕ್ಕಾಗಿ ದನ ಕಡಿಯುತ್ತಿದ್ದ ವೇಳೆ ಕಡಬ ಪೋಲಿಸರು ದಾಳಿ ನಡೆಸಿದ್ದು ಈ ಸಂದರ್ಭದಲ್ಲಿ ಅರ್ಧ ತಲೆ ಕಡಿದ ದನ ಹಾಗೂ ಮಾಂಸಕ್ಕಾಗಿ ತಂದಿರುವ ಜಾನುವಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಡಬ ಎಸ್.ಐ. ಆಂಜನೇಯ ರೆಡ್ಡಿ, ಎ.ಎಸ್.ಐ.ಸುರೇಶ್ ಹಾಗೂ ಸಿಬ್ಬಂದಿಗಳು ಸ್ಥಳದಲ್ಲಿದ್ದಾರೆ.

ಪೊಲೀಸರ ಜತೆ ಮಾತಿನ ಚಕಮಕಿ:
ಈ ಸಂದರ್ಭದಲ್ಲಿ ಸ್ಥಳೀಯರು  ಪೊಲೀಸರ ಜತೆ ಮಾತಿನ ಚಕಮಕಿಗಿಳಿದ್ದಾರೆ. ಈಗಾಗಲೇ ಆರೋಪಿ ಫಾರೂಕ್ ಹಾಗೂ ಇತರರು ಸ್ಥಳದಿಂದ ಪರಾರಿಯಾಗಿದ್ದಾರೆ.

LEAVE A REPLY

Please enter your comment!
Please enter your name here