- ಪೊಲೀಸರ ಜತೆ ಮಾತಿನ ಚಕಮಕಿಗಿಳಿದಿರುವ ಸ್ಥಳೀಯರು!
ಕಡಬ: ಇಲ್ಲಿನ ಕಳಾರ ಸಮೀಪದ ತಿಮರಡ್ಡ ಎಂಬಲ್ಲಿ ಮಾಂಸಕ್ಕಾಗಿ ದನ ಕಡಿಯುತ್ತಿದ್ದ ವೇಳೆ ಕಡಬ ಪೋಲಿಸರು ದಾಳಿ ನಡೆಸಿದ್ದು ಈ ಸಂದರ್ಭದಲ್ಲಿ ಅರ್ಧ ತಲೆ ಕಡಿದ ದನ ಹಾಗೂ ಮಾಂಸಕ್ಕಾಗಿ ತಂದಿರುವ ಜಾನುವಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಡಬ ಎಸ್.ಐ. ಆಂಜನೇಯ ರೆಡ್ಡಿ, ಎ.ಎಸ್.ಐ.ಸುರೇಶ್ ಹಾಗೂ ಸಿಬ್ಬಂದಿಗಳು ಸ್ಥಳದಲ್ಲಿದ್ದಾರೆ.
ಪೊಲೀಸರ ಜತೆ ಮಾತಿನ ಚಕಮಕಿ:
ಈ ಸಂದರ್ಭದಲ್ಲಿ ಸ್ಥಳೀಯರು ಪೊಲೀಸರ ಜತೆ ಮಾತಿನ ಚಕಮಕಿಗಿಳಿದ್ದಾರೆ. ಈಗಾಗಲೇ ಆರೋಪಿ ಫಾರೂಕ್ ಹಾಗೂ ಇತರರು ಸ್ಥಳದಿಂದ ಪರಾರಿಯಾಗಿದ್ದಾರೆ.