ನೆಲ್ಯಾಡಿ: ಸಂತ ಜೋರ್ಜರ ನಾಮದಲ್ಲಿ ಪ್ರಸಿದ್ಧಿ ಹೊಂದಿರುವ ಕರ್ನಾಟಕದ ಪ್ರಥಮ ಜೋರ್ಜಿಯನ್ ತೀರ್ಥಾಟನಾ ಕೇಂದ್ರವಾದ ಕಡಬ ತಾಲೂಕಿನ ಇಚ್ಲಂಪಾಡಿ ಸೈಂಟ್ ಜೋರ್ಜ್ ಓರ್ಥಡೋಕ್ಸ್ ಸಿರಿಯನ್ ಚರ್ಚ್ನ ವಾರ್ಷಿಕ ಹಬ್ಬದ ಧ್ವಜಾರೋಹಣ ಮೇ. 1ರಂದು ಬೆಳಿಗ್ಗೆ ನಡೆಯಿತು.
ಮೇ ೧ ರಿಂದ ೭ರ ತನಕ ವಾರ್ಷಿಕ ಹಬ್ಬವು ಬ್ರಹ್ಮಾವರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಯಾಕೋಬ್ ಮಾರ್ ಏಲಿಯಾಸ್ ಮೆತ್ರಾಪೋಲಿತ್ತಾ ಹಾಗೂ ರೆ.ಫಾ.ಡಾ| ಜೋನ್ಸ್ ಅಬ್ರಹಾಂ ಕೋನಾಟ್ರವರ ನೇತೃತ್ವದಲ್ಲಿ ಹಾಗೂ ಅನೇಕ ಧರ್ಮಗುರುಗಳ ಸಹಕಾರದೊಂದಿಗೆ ನಡೆಯಲಿದೆ. ಮೇ ೧ರಂದು ಬೆಳಿಗ್ಗೆ ಪ್ರಭಾತ ಪ್ರಾರ್ಥನೆ, ಬ್ರಹ್ಮಾವರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಯಾಕೋಬ್ ಮಾರ್ ಏಲಿಯಾಸ್ ಮೆತ್ರಾಪೋಲಿತ್ತಾರವರ ನೇತೃತ್ವದಲ್ಲಿ ದಿವ್ಯ ಬಲಿಪೂಜೆ, ಸಂತ ಜೋರ್ಜರೊಂದಿಗಿನ ಮಧ್ಯಸ್ಥ ಪ್ರಾರ್ಥನೆ ನಡೆದು ಹಬ್ಬದ ಧ್ವಜಾರೋಹಣ ನಡೆಯಿತು. ಈ ಸಂದರ್ಭದಲ್ಲಿ ಚರ್ಚ್ನ ಧರ್ಮಗುರುಗಳಾದ ರೆ.ಫಾ.ಪೌಲ್ ಜೇಕಬ್, ಕಾರ್ಯದರ್ಶಿ ವಿ.ಎನ್.ಚಾಕೋ, ಟ್ರಸ್ಟಿ ಜೋನ್ ಅಬ್ರಹಾಂ ಚೀರಮಟ್ಟಂ, ಆಡಳಿತ ಮಂಡಳಿ ಸದಸ್ಯರುಗಳಾದ ಟಿ.ಜೆ.ಕುರಿಯಾಕೋಸ್, ಮೋಳಿ ತೋಮಸ್, ರೋಯಿ ಟಿ.ಕೆ., ಉಣ್ಣಿಟ್ಟ ಯಂ.ಕೆ., ಮನೋಜ್ ಟಿ.ಬಿ., ಜಿ.ಜೋಸೆಫ್, ಜೋಜು ಜೋಸೆಫ್, ಸುನಿಲ್ ಟಿ.ಬಿ., ಸುನೀಶ್ ಟಿ.ಪಿ.,ಹಾಗೂ ಚರ್ಚ್ನ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.
\