ಪುತ್ತೂರು : ಪುತ್ತೂರು ಜಿಡೆಕಲ್ಲಿನಲ್ಲಿರುವ ಹಾಲು ಶೀತಲೀಕರಣ ಕೇಂದ್ರದಲ್ಲಿ ಮೇ.೧ರಂದು ಕಾರ್ಮಿಕರ ದಿನಾಚರಣೆ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಶೀತಲೀಕರಣ ಕೇಂದ್ರದ ಎಲ್ಲಾ ಖಾಯಂ, ಗುತ್ತಿಗೆ, ಕ್ಷೀರಪಥ ವಾಹನ ಚಾಲಕ ಸಿಬ್ಬಂದಿಗಳು ಬಾಗವಹಿಸಿ ಸ್ವಚ್ಛತೆ ಮಾಡಿದರು.
ಶೀತಲೀಕರಣ ಕೇಂದ್ರದ ಮೇಲ್ವಿಚಾರಕ ಪುಷ್ಪರಾಜ್ ಹೆಚ್., ಅಧಿಕಾರಿಗಳಾದ ಸೆಲ್ಲ ಕುಮಾರ್, ಮಾಧವ ರೈ, ಹರೀಶ್ ಕುಮಾರ್, ವೇದಾವತಿ, ಜಯಶ್ರೀ, ರಕ್ಷಾ, ಸಿಬ್ಬಂದಿಗಳಾದ ಶಣ್ಮುಖ, ಸತೀಶ್ ಕುಮಾರ್, ಚಂದ್ರಶೇಖರ, ಸಂಜೀವ ರೈ, ಶಿವರಾಮ ಪ್ರಭು, ಚೇತನ್ ಕುಮಾರ್, ಮೊಹಮ್ಮದ್ ಸಿನಾನ್, ರಾಜೇಶ್ ಕೆ.ಎಂ, ರಾಜೇಶ್ ರೈ, ಸಂತೋಷ್, ನಿತಿನ್, ಭದ್ರತಾ ಸಿಬ್ಬಂದಿಗಳಾದ ಅವಿನಾಶ್, ಗಣೇಶ್ ಕಿಣಿಯಾರ್, ವಾಹನ ಚಾಲಕರಾದ ರವೀಚಂದ್ರ, ವೆಂಕಟರಮಣ, ಯತೀಶ್ ಕುಮಾರ್, ತಿಲಕ್ ಮುಂತಾದವರು ಉಪಸ್ಥಿತರಿದ್ದರು.