ಪುತ್ತೂರು: ಕೋಡಿಂಬಾಡಿ ಗ್ರಾಮದ ಶಾಂತಿನಗರ ದಿ. ಯು.ವಿ.ಗೋವಿಂದ ಭಟ್ ಅವರ ಪತ್ನಿ ಪರಮೇಶ್ವರಿ(79)ರವರು ಅಲ್ಪಕಾಲದ ಅಸೌಖ್ಯದಿಂದಾಗಿ ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರರಾದ 34 ನೆಕ್ಕಿಲಾಡಿಯ ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದ ಆಡಳಿತ ಮೊಕ್ತೇಸರರೂ, ಉಪ್ಪಿನಂಗಡಿ ಶ್ರೀರಾಮ ಶಾಲೆ ಮತ್ತು ಇಂದ್ರಪ್ರಸ್ಥ ವಿದ್ಯಾಲಯದ ಸಂಚಾಲಕರೂ ಆಗಿರುವ ಕೈಲಾರ್ ಮೆಡಿಕಲ್ಸ್ ಮಾಲಕ ಯು.ಜಿ.ರಾಧಾ, ವೆಂಕಟರಮಣ ಅಡೂರು, ಶ್ರೀರಾಮ ಪುತ್ತೂರು, ನರಸಿಂಹ ಪುತ್ತೂರು, ಶಿವಪ್ರಸಾದ್ ಅಡ್ಯನಡ್ಕ, ಪುತ್ರಿಯರಾದ ನಿತ್ಯ ಲಕ್ಷ್ಮಿನಾರಾಯಣ ಬೆಳ್ಳಾರೆ, ಉಷಾ ಸತ್ಯಶಂಕರ್ ಮಾಣಿಮುಂಡ ಮತ್ತು ಸೊಸೆಯಂದಿರು, ಅಳಿಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
ಮೃತರ ಮನೆಗೆ ನೂರಾರು ಮಂದಿ ಭೇಟಿ ನೀಡಿ ಸಾಂತ್ವನ ಹೇಳಿದರು.