ಭಾರತ ಕಟ್ಟಡ ಕಾರ್ಮಿಕ ಸಂಘದಿಂದ ರಕ್ತದಾನ

0

 

ಪುತ್ತೂರು: ಭಾರತ ಕಟ್ಟಡ ಕಾರ್ಮಿಕ ಸಂಘದ ವತಿಯಿಂದ ಕಾರ್ಮಿಕ ದಿನಾಚರಣೆ ಅಂಗವಾಗಿ ಮೇ 1ರಂದು ರಕ್ತದಾನ ಕಾರ್ಯಕ್ರಮ ನಡೆಯಿತು. ಸಂಘದ ಗೌರವಾಧ್ಯಕ್ಷ ಲೋಕೇಶ ಹೆಗ್ಡೆಯವರು ಅಧ್ಯಕ್ಷತೆ ವಹಿಸಿ ಮಾತನಾಡಿ ನೂರಾರು ವರ್ಷಗಳ ಹಿಂದೆ ದುಡಿಯುವ ವರ್ಗವು ತಮ್ಮ ಹಕ್ಕಿಗಾಗಿ ನಡೆಸಿದ ಹೋರಾಟಕ್ಕೆ ಪ್ರಥಮ ಜಯ ಸಿಕ್ಕ ದಿನವನ್ನು ಜಗತ್ತಿನಾದ್ಯಂತ ಕಾರ್ಮಿಕರ ದಿನ ವಾಗಿ ಆಚರಿಸಲ್ಪಡುತ್ತಿದೆ. ಹಾಗಾಗಿ ಕಾರ್ಮಿಕರು ಸದಾ ಸಂಘಟಿತರಾಗಿರಬೇಕು. ಸಂಘದ ಅಧ್ಯಕ್ಷ ಇನಾಸ್ ವೇಗಸ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ವಸಂತ ಬೆದ್ರಾಳ ವಂದಿಸಿದರು. ಸಂಘದ ಉಪಾಧ್ಯಕ್ಷ ರುಕ್ಮಯ ಗೌಡ, ಸಂಘಟನಾ ಕಾರ್ಯದರ್ಶಿ ಅಣ್ಣಿ ಪೂಜಾರಿ, ಜೊತೆ ಕಾರ್ಯದರ್ಶಿ ರಾಜ್ ಕಾರೆಕ್ಕಾಡು, ಲೋಕೇಶ್, ಜಗನ್ನಾಥ, ಗಮಿತ್ ಮತ್ತು ಅಶ್ರಫ್ ಉಪಸ್ಥಿತರಿದ್ದರು. ಬಳಿಕ ರಕ್ತದಾನ ಶಿಬಿರ ನಡೆಯಿತು.

LEAVE A REPLY

Please enter your comment!
Please enter your name here