ಅನ್ನಜಾತ್ ಎಂ.ಆರ್ ಹೆಲ್ಪಿಂಗ್ ಕಮಿಟಿಯಿಂದ 6ನೇ ವರ್ಷದ ಈದ್ ಕಿಟ್ ವಿತರಣೆ

0


ಪುತ್ತೂರು: ಅನ್ನಜಾತ್ ಎಂ.ಆರ್ ಹೆಲ್ಪಿಂಗ್ ಕಮಿಟಿ ಪುತ್ತೂರು ಇದರ ವತಿಯಿಂದ ಪುತೂರು ತಾಲೂಕಿನ ಆಸುಪಾಸಿನ ಬಡ ಅರ್ಹ ಕುಟುಂಬದವರಿಗೆ 130 ಈದ್ ಕಿಟ್ ವಿತರಿಸಲಾಯಿತು.ಅಬ್ದುಲ್ ರವೂಫ್ ಅಧ್ಯಕ್ಷತೆ ವಹಿಸಿದ್ದರು. ದುವಾ ನೆರವೇರಿಸಿದ ಕಮಿಟಿಯ ಗೌರವಾಧ್ಯಕ್ಷರಾದ ಅಬೂಬಕರ್ ಸಿದ್ದೀಕ್ ಜಲಾಲಿ ಮಾತನಾಡಿ ಬಡವರ ಪರವಾಗಿ ಕಾರ್ಯ ನಿರ್ವಹಿಸುತ್ತಿರುವ ಅನ್ನಜಾತ್ ಎಂ.ಆರ್ ಹೆಲ್ಪಿಂಗ್ ಕಮಿಟಿಯ ಕಾರ್ಯಚಟುವಟಿಕೆಗಳ ಬಗ್ಗೆ ಶ್ಲಾಘಿಸಿದರು. ಮುಬಾರಕ್ ಮುಹಮ್ಮದ್ ಹಾಜಿ ಉಪಸ್ಥಿತರಿದ್ದರು.

ಕೆ.ಎಂ ಖಾದರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಮಿಟಿಯ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಬೀಟಿಗೆ ಸ್ವಾಗತಿಸಿ ವಂದಿಸಿದರು. ಇಸ್ಮಾಯಿಲ್ ಕೆನರಾ, ಕೋಶಾಧಿಕಾರಿ ಇಕ್ಬಾಲ್ ಬಪ್ಪಳಿಗೆ, ಮಾಜಿ ಅಧ್ಯಕ್ಷರಾದ ತಕಿಯುದ್ದೀನ್ ಮಿತ್ತೂರು, ಸರ್ವೇ ತಂಡದ ಜಾವೇದ್ ಮಿತ್ತೂರು, ಶರೀಫ್ ಮುಕ್ರಂಪಾಡಿ, ಫಾರೂಕ್ ಮುಂತಾದವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಅನ್ನಜಾತ್ ಎಂ.ಆರ್ ಹೆಲ್ಪಿಂಗ್ ಕಮಿಟಿ ಸದಸ್ಯರು ಪ್ರತಿ ಮನೆ ಮನೆಗೆ ತೆರಳಿ ಈದ್ ಕಿಟ್ ವಿತರಿಸಿದರು.

LEAVE A REPLY

Please enter your comment!
Please enter your name here