ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಯಕ್ಷಗಾನ ತಾಳಮದ್ದಳೆ

0


ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದಿಂದ ತಿಂಗಳ ಸರಣಿ ಯಕ್ಷಗಾನ ತಾಳಮದ್ದಳೆ ” ಭೀಷ್ಮ ಪ್ರತಿಜ್ಞೆ ” ನಡೆಯಿತು. ಹಿಮ್ಮೇಳದಲ್ಲಿ ಪದ್ಮನಾಭ ಕುಲಾಲ್ ಇಲಂತಿಲ, ಆನಂದ ಸವಣೂರು, ನಿತೇಶ್ ಈಶ್ವರಮಂಗಲ, ಡಾ. ಶ್ರೀಪ್ರಕಾಶ್ ಬಂಗಾರಡ್ಕ , ಮುರಳೀಧರ ಕಲ್ಲೂರಾಯ, ತಾರಾನಾಥ ಸವಣೂರು ಸಹಕರಿಸಿದರು. ಮುಮ್ಮೇಳದಲ್ಲಿ ಶಂತನು ( ಭಾಸ್ಕರ್ ಬಾರ್ಯ ), ದೇವವೃತ ( ಗುಂಡ್ಯಡ್ಕ ಈಶ್ವರ ಭಟ್ ), ದಾಶರಾಜ ( ಪಕಳಕುಂಜ ಶ್ಯಾಮ್ ಭಟ್ ), ಯೋಜನಗಂಧಿ ( ಕು೦ಬ್ಳೆ ಶ್ರೀಧರ್ ರಾವ್ ), ಮಂತ್ರಿ ( ಬಡೆಕ್ಕಿಲ ಚಂದ್ರಶೇಖರ್ ಭಟ್ ) ಸಹಕರಿಸಿದರು. ಟಿ. ರಂಗನಾಥ ರಾವ್ ಸ್ವಾಗತಿಸಿ, ಪ್ರದೀಪ ಹೆಬ್ಬಾರ್ ವಂದಿಸಿದರು.

LEAVE A REPLY

Please enter your comment!
Please enter your name here