ಉಪ್ಪಿನಂಗಡಿ: ನಿವೃತ್ತ ಯೋಧನಿಗೆ ಜನತೆಯ ಸ್ವಾಗತ

0


ಉಪ್ಪಿನಂಗಡಿ: ಭಾರತೀಯ ಭೂ ಸೇನೆಯಲ್ಲಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದುಕೊಂಡು ಹುಟ್ಟೂರಿಗೆ ಆಗಮಿಸಿದ ಹವಾಲ್ದಾರ್ ಹರಿಚಂದ್ರರವರಿಗೆ ಉಪ್ಪಿನಂಗಡಿಯಲ್ಲಿ ಸೋಮವಾರದಂದು ಹೃದಯಸ್ಪರ್ಶಿ ಸ್ವಾಗತ ನೀಡಲಾಯಿತು.

ದೇಶದ ವಿವಿಧೆಡೆಗಳಲ್ಲಿ ಸೇವೆ ಸಲ್ಲಿಸಿದ ಇವರು ಜಮ್ಮುಕಾಶ್ಮಿರದ ನೌಶೇರಾ ಸೆಕ್ಟರ್ ಹಾಗೂ ಸಿಯಾಚಿನ್ ಗ್ಲೇಸಿಯಾರ್ ನಂತಹ ಸೂಕ್ಷ್ಮ ಪ್ರದೇಶದಲ್ಲಿ ಕಾರ್ಯ ನಿರ್ವಹಿಸಿ ಕಳೆದ ಎಪ್ರಿಲ್ 30ರಂದು ಸೇವಾ ನಿವೃತ್ತಿಯನ್ನು ಪಡೆದು ಇಚ್ಲಂಪಾಡಿಯ ಸ್ವಗೃಹಕ್ಕೆ ತೆರಳುವ ಸಂದರ್ಭದಲ್ಲಿ ಮಾರ್ಗ ಮಧ್ಯೆ ಉಪ್ಪಿನಂಗಡಿಯಲ್ಲಿ ನಾಗರಿಕರಿಂದ ಸ್ವಾಗತ ಕಾರ್ಯಕ್ರಮ ನಡೆಯಿತು.
ಜಾತಿ- ಧರ್ಮದ ಹಂಗಿಲ್ಲದೆ ಸಮಾಜದ ಎಲ್ಲಾ ವರ್ಗದ ಜನತೆ ಅವರಿಗೆ ಹೂ ಹಾರ, ಹೂ ಗುಚ್ಚ, ಸ್ಮರಣಿಕೆ ನೀಡಿ ಗೌರವಿಸಿದರು.

LEAVE A REPLY

Please enter your comment!
Please enter your name here