ಈದುಲ್ ಫಿತ್ರ್ ಹಬ್ಬದಂಗವಾಗಿ ಮಾಯಿದೆ ದೇವುಸ್ ಚರ್ಚ್ ಧರ್ಮಗುರುಗಳಿಗೆ ಶುಭಾಶಯ ಕೋರಿದ ಮುಸ್ಲಿಂ ಬಾಂಧವರು

0

ಪುತ್ತೂರು:ಈದುಲ್ ಫಿತ್ರ್ ಹಬ್ಬದಂಗವಾಗಿ ಮೋನು ಬಪ್ಪಳಿಗೆ ನೇತೃತ್ವದ ಮುಸ್ಲಿಂ ಬಾಂಧವರು ಮಾಯಿದೆ ದೇವುಸ್ ಚರ್ಚ್ ಗೆ ಆಗಮಿಸಿ ಚರ್ಚ್ ಪ್ರಧಾನ ಧರ್ಮಗುರುಗಳಾದ ವಂ|ಲಾರೆನ್ಸ್ ಮಸ್ಜರೇನ್ಹಸ್ ರವರಿಗೆ ಹಬ್ಬದ ಸಿಹಿಯ ದ್ಯೋತಕವಾಗಿ ಸಿಹಿ ಪೊಟ್ಟಣದೊಂದಿಗೆ ಶುಭಾಶಯವನ್ನು ನೀಡಿ ಹಬ್ಬವನ್ನು ಆಚರಿಸಿದರು.

ಈ ಸಂದರ್ಭದಲ್ಲಿ ಚರ್ಚ್ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್ ರವರು ಆಗಮಿಸಿದ ಮುಸ್ಲಿಂ ಬಾಂಧವರಿಗೆ ಹಬ್ಬದ ಶುಭಾಶಯಗಳನ್ನು ತಿಳಿಸಿ ಎಲ್ಲವೂ ಒಳ್ಳೆಯದಾಗಲೆಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮುಸ್ಲಿಂ ಬಾಂಧವರರಾದ ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಮೋನು ಬಪ್ಪಳಿಗೆ, ಹನೀಫ್ ಪುಣ್ಚತ್ತಾರು, ಶಹನಾಜ್ ಬಪ್ಪಳಿಗೆ, ಮಹಮದಾಲಿ ಪರ್ಲಡ್ಕ, ಬಶೀರ್ ಪರ್ಲಡ್ಕ, ರಶೀದ್ ಮುರ, ಹಂಜತ್ ಸಾಲ್ಮರ, ಇಮ್ತಿಯಾಜ್ ಬಪ್ಪಳಿಗೆ, ಇರ್ಪಾನ್ ಸಾಲ್ಮರ, ನಝೀರ್ ಬಲ್ನಾಡುರವರೊಂದಿಗೆ ಕಥೋಲಿಕ್ ಸಭಾ ವಲಯ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನ್ಹಸ್, ಕಥೋಲಿಕ್ ಸಭಾ ಪುತ್ತೂರು ಘಟಕದ ನಿಕಟಪೂರ್ವ ಅಧ್ಯಕ್ಷ ಪಾವ್ಲ್ ಮೊಂತೇರೋ, ನ್ಯಾಯವಾದಿ ರಾಕೇಶ್ ಮಸ್ಕರೇನ್ಹಸ್, ಪತ್ರಕರ್ತ ಸಂತೋಷ್ ಮೊಟ್ಟೆತ್ತಡ್ಕರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here