ಕಾಂತಿಜಾಲು ಅಂಗನವಾಡಿ ಕೇಂದ್ರದಲ್ಲಿ ಪುಟಾಣಿಗಳಿಗೆ ಬೀಳ್ಕೊಡುಗೆ, ಕೊಡಿಮರ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ರೇವತಿಯವರಿಗೆ ಸನ್ಮಾನ

0

ಪುತ್ತೂರು: ಬೆಳ್ಳಿಪ್ಪಾಡಿ ಗ್ರಾಮದ ಕಾಂತಿಜಾಲು ಅಂಗನವಾಡಿ ಕೇಂದ್ರದಲ್ಲಿ ಪುಟಾಣಿಗಳಿಗೆ ಬೀಳ್ಕೊಡುಗೆ ಮತ್ತು ತಾಲೂಕು ಮಟ್ಟದ ಅತ್ಯುತ್ತಮ‌ ಅಂಗನವಾಡಿ ಕಾರ್ಯಕರ್ತೆ ಪ್ರಶಸ್ತಿ ಪುರಸ್ಕೃತರಾಗಿರುವ ಬೆಳ್ಳಿಪ್ಪಾಡಿ ಕೊಡಿಮರ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ರೇವತಿ‌ ಎ.ರವರಿಗೆ ಸನ್ಮಾನ ಕಾರ್ಯಕ್ರಮ ಕಾಂತಿಜಾಲು ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.

ಬಾಲವಿಕಾಸ ಸಮಿತಿ ಅಧ್ಯಕ್ಷೆ ಯಶೋದ ಡಿ, ಕೋಡಿಂಬಾಡಿ ಗ್ರಾ.ಪಂ. ಸದಸ್ಯರಾದ ರಾಮಣ್ಣ ಗೌಡ ಗುಂಡೋಲೆ, ಪುಷ್ಪಾ ಲೋಕಯ್ಯ ನಾಯ್ಕ, ಬೆಳ್ಳಿಪ್ಪಾಡಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಯಶೋದ, ಬಾಲವಿಕಾಸ ಸಮಿತಿ ಸದಸ್ಯರಾದ ಗಂಗಾಧರ ಗೌಡ ಕೊಡ್ಯಡ್ಕ, ಹರಿಪ್ರಸಾದ್ ಕೂಟೇಲು, ಪ್ರಸಾದ್ ಕೂಟೇಲು, ಹಿರಿಯ ನಾಗರಿಕೆ ಕಮಲ ಕೂಟೇಲು, ಸನ್ಮಾನಿತೆ ರೇವತಿ ಕೊಡಿಮರ, ನೇತ್ರಾವತಿ ಕೋರ್ತಾಜೆ, ಸ್ವರ್ಣ ಸ್ತ್ರೀಶಕ್ತಿ ಸ್ವಸಹಾಯ ಸಂಘದ ಅಧ್ಯಕ್ಷೆ ಮೀನಾಕ್ಷಿ ಹೊಸಗದ್ದೆ, ಸಂಜೀವಿನಿ ಒಕ್ಕೂಟದ ಪದಾಧಿಕಾರಿ ಪೂರ್ಣಿಮಾ, ಶಿವಮ್ಮ ಕೂಟೇಲು, ಹೇಮಲತಾ ಜರಿಮನೆ‌ ಮತ್ತು ಸುಜಾತಾ ಕೋರ್ತಾಜೆ ಉಪಸ್ಥಿತರಿದ್ದರು.

ಬೀಳ್ಕೊಡುಗೆ ಪಡೆದ‌ ಪುಟಾಣಿಗಳಾದ ಸರ್ವ ಕೂಟೇಲು ಹಾಗೂ ಅಧಿಶ ಕೂಟೇಲುರವರು ಅಂಗನವಾಡಿ ಕೇಂದ್ರಕ್ಕೆ ಕಬ್ಬಿಣದ ಬ್ಯಾಗ್ ಸ್ಟ್ಯಾಂಡ್, ತೃಷಾ ಹೊಸಗದ್ದೆರವರು 25 ಸ್ಟೀಲ್ ಗ್ಲಾಸ್, ರಿಷಿಕಾ ಕೊಲ್ತಾರ್ ಅವರು ತೆಂಗಿನಕಾಯಿ ಸುಲಿಯುವ ಯಂತ್ರ, ದೀಕ್ಷಾ ಪಾದೆಕಲ್ಲುರವರು ಧನ ಸಹಾಯ, ತನ್ವಿ ಜರಿ ಮನೆರವರು 1 ಸ್ಟಿಲ್ ಜಗ್, ಕೊಡುಗೆ ನೀಡಿದರು. ಅಂಗನವಾಡಿ ಕಾರ್ಯಕರ್ತೆ ಗೌರಿ ಸ್ವಾಗತಿಸಿ ವಂದಿಸಿದರು. ಸಹಾಯಕಿ ಹರಿಣಿ ಸಹಕರಿಸಿದರು.

LEAVE A REPLY

Please enter your comment!
Please enter your name here