ಬರೆಪ್ಪಾಡಿ ಶ್ರೀ ಕ್ಷೇತ್ರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಶ್ನಾಚಿಂತನೆ ಮುಕ್ತಾಯ

0

ಕಾಣಿಯೂರು: ಶ್ರೀ ಕ್ಷೇತ್ರ ಬರೆಪ್ಪಾಡಿ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ದೈವಜ್ಞರಾದ ರಾಮಚಂದ್ರನ್ ತಚ್ಛಂಗಾಡು ಅವರಿಂದ ಹದಿಮೂರು ದಿನಗಳ ಪ್ರಶ್ನಾಚಿಂತನೆ ನಡೆದು ಮುಕ್ತಾಯಗೊಂಡಿದೆ. ಪ್ರಶ್ನಾಚಿಂತನೆಯಲ್ಲಿ ಕಂಡುಬಂದ ದೋಷಗಳ ಪರಿಹಾರದ ಬಗ್ಗೆ ತಿಳಿಸಿದ್ದು ಮುಂದಿನ ದಿನಗಳಲ್ಲಿ ಪರಿಹಾರ ಕಾರ್ಯಗಳು ಅತೀ ಶೀಘ್ರವಾಗಿ ಮಾಡುವಂತೆ ಸೂಚಿಸಿದ್ದಾರೆ.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ವಿಠಲ ಗೌಡ ಬರೆಪ್ಪಾಡಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಮೇಶ್ ಕೆ.ಎನ್.ಕಾರ್ಲಾಡಿ, ಜತ್ತಪ್ಪ ರೈ ಬರೆಪ್ಪಾಡಿ, ಐತಪ್ಪ ಗೌಡ ಕುವೆತ್ತೊಡಿ, ಶ್ರೀಧರ ಗೌಡ ಕೊಯಕ್ಕುಡೆ, ನಿರ್ಮಲ ಕೇಶವ ಅಮೈ, ಪುಷ್ಪಲತಾ ಪದ್ಮಯ್ಯ ದರ್ಖಾಸು, ಯಶೋದ ಎರ್ಕಮೆ
ಹಾಗೂ ಊರ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here