ಸಾನ್ವಿ ಜ್ಯುವೆಲ್ಲರಿ ಸ್ಥಳಾಂತರಗೊಂಡು ಶುಭಾರಂಭ

0


ಪುತ್ತೂರು: ಪುತ್ತೂರು ಸಂತೆಕಟ್ಟೆ ಬಳಿ ವ್ಯವಹರಿಸುತ್ತಿದ್ದ ಚಿನ್ನಾಭರಣಗಳ ಮಳಿಗೆ ಸಾನ್ವಿ ಜ್ಯುವೆಲ್ಲರಿ ಮೇ. 3 ರಂದು ಕೋರ್ಟುರಸ್ತೆಯಲ್ಲಿರುವ ವೈಭವ್ ಬಿಲ್ಡಿಂಗ್‌ಗೆ ಸ್ಥಳಾಂತರಗೊಂಡು ಶುಭಾರಂಭಗೊಂಡಿತು. ಲಕ್ಷ್ಮೀ ಜ್ಯುವೆಲ್ಲರ್‍ಸ್‌ನ ಮಾಲಕ ಭಾಸ್ಕರ ಆಚಾರ್ಯರವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಡಾ. ಜಯರಾಮ ರೈ ಪನ್ನೆಗುತ್ತು, ಭಾಮಿ ಜಗದೀಶ ರೈ, ವೈಭವ್ ಬಿಲ್ಡಿಂಗ್‌ನ ಬಾಲಕೃಷ್ಣ ಪೈ, ವಕೀಲರಾದ ಮಾಧವ, ಬಂಗಾರದ ಕಟ್ಟೆಯ ಸತೀಶ್ ನಾಯಕ್, ಉದಯ ಜ್ಯುವೆಲ್ಲರ್‍ಸ್‌ನ ಅಣ್ಣಿ ಆಚಾರ್ಯ ಮತ್ತಿತರರು ಆಗಮಿಸಿ ಶುಭ ಹಾರೈಸಿದರು. ಮಾಲಕ ರಾಜೇಂದ್ರ ಆಚಾರ್ಯ ಆತಿಥಿಗಳನ್ನು ಸ್ವಾಗತಿಸಿ ಮಾತಾಡುತ್ತಾ ನಮ್ಮಲ್ಲಿ ಸಾಂಪ್ರದಾಯಿಕ ಹಾಗೂ ವಿನೂತನ ಶೈಲಿಯ 916 ಚಿನ್ನಾಭರಣಗಳನ್ನು ಗ್ರಾಹಕರ ಅಪೇಕ್ಷೆಯಂತೆ ಕ್ಲಪ್ತ ಸಮಯದಲ್ಲಿ ತಯಾರಿಸಿ ಕೊಡಲಾಗುವುದು ಎಂದು ತಿಳಿಸಿ ವಂದಿಸಿದರು.

LEAVE A REPLY

Please enter your comment!
Please enter your name here