ಗ್ರಾಹಕರ ಪ್ರಶಂಸೆಗೆ ಪಾತ್ರವಾಯಿತು ಪುತ್ತೂರಿನ ಜೋಸ್ ಆಲುಕ್ಕಾಸ್ ಜ್ಯುವೆಲ್ಲರಿಯ ಅಕ್ಷಯ ತೃತೀಯದ ಕೊಡುಗೆ

0

ಪುತ್ತೂರು: ಇಲ್ಲಿನ ಕೆ.ಎಸ್.ಆರ್.ಟಿ.ಸಿ. ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಅಂತಾರಾಷ್ಟ್ರೀಯ ಚಿನ್ನಾಭರಣ ಮಳಿಗೆ ಜೋಸ್ ಆಲುಕ್ಕಾಸ್ ನಲ್ಲಿ ಅಕ್ಷಯ ತೃತೀಯದ ಹಿನ್ನೆಲೆಯಲ್ಲಿ‌ ಗ್ರಾಹಕರಿಂದ ತುಂಬಿ ಹೋಗಿದ್ದು, ಸಂಸ್ಥೆಯ ಕೊಡುಗೆಗಳು ಗ್ರಾಹಕರ ವ್ಯಾಪಕ ಪ್ರಶಂಸೆ ಪಾತ್ರವಾಗಿದೆ.

ಅಕ್ಷಯ ತೃತೀಯ ಪ್ರಯುಕ್ತ ಸಂಸ್ಥೆಯಲ್ಲಿ ವಾರಗಳ ಹಿಂದಿನಿಂದಲೇ ಅಡ್ವಾನ್ಸ್ ಬುಕ್ಕಿಂಗ್ ಪ್ರಾರಂಬಗೊಂಡಿತ್ತು. ಗ್ರಾಹಕರು ಖರೀದಿಸುವ  ಚಿನ್ನಾಭರಣಗಳ ಒಟ್ಟು ಮೊತ್ತದ 10% ಹಣವನ್ನು  ಮುಂಗಡ ಪಾವತಿ ಮಾಡಿ ಬುಕ್ಕಿಂಗ್ ಮಾಡುವ ಅವಕಾಶವನ್ನು ಸಂಸ್ಥೆ ನೀಡಿತ್ತು. ಅಕ್ಷಯ ತೃತೀಯದ ಶುಭ ಸಂದರ್ಭದಲ್ಲಿಚಿನ್ನಾಭರಣ ಖರೀದಿಸುವ ವೇಳೆ ಚಿನ್ನದ ಬೆಲೆ  ಬುಕ್ಕಿಂಗ್ ಮಾಡಿದ ದರಕ್ಕಿಂತ ಹೆಚ್ಚಾಗಿದ್ದರೆ ಬುಕ್ಕಿಂಗ್ ಮಾಡಿದ ಬೆಲೆಗೆ ಚಿನ್ನಾಭರಣವನ್ನು ಖರೀದಿಸಲು ಸಂಸ್ಥೆ ಅವಕಾಶ ಕಲ್ಪಿಸಿತ್ತು. ಇಷ್ಟು ಮಾತ್ರವಲ್ಲದೆ  ಅಡ್ವಾನ್ಸ್ ಬುಕ್ಕಿಂಗ್ ಮಾಡಿದ ಗ್ರಾಹಕರು ಪ್ರತೀ 35ಸಾವಿರ ರೂಪಾಯಿಗಿಂತ ಹೆಚ್ಚಿನ ಮೊತ್ತದ ಚಿನ್ನಾಭರಣ ಖರೀದಿಸಿದ ವೇಳೆ  ಚಿನ್ನದ ನಾಣ್ಯ ಉಚಿತವಾಗಿ ನೀಡಲಾಗಿತ್ತು

ಇನ್ನುಳಿದಂತೆ ಅಕ್ಷಯ ತೃತಿಯಕ್ಕಾಗಿ ಹಲವಾರು ಕೊಡುಗೆಗಳನ್ನು ನೀಡಿರುವ ಜೋಸ್ ಆಲುಕ್ಕಾಸ್ ನಲ್ಲಿ  ಹೊಚ್ಚ ಹೊಸ ವಿನ್ಯಾಸದ ಚಿನ್ನ ಹಾಗೂ ವಜ್ರದ ಆಭರಣಗಳ ಬೃಹತ್ ಸಂಗ್ರಹ ಲಭ್ಯವಿದ್ದು ಇದು ಗ್ರಾಹಕರಿಗೆ ಮತ್ತಷ್ಟು ಸಹಕಾರಿಯಾಗಿತ್ತು. ಅಕ್ಷಯ ತೃತೀಯ ಸಂದರ್ಭದಲ್ಲಿ ಖರೀದಿಸುವ ಚಿನ್ನಾಭರಣವನ್ನು ಅರ್ಚಕರಿಂದ ಪೂಜಿಸಿಕೊಡುವ ವ್ಯವಸ್ಥೆ ಸಂಸ್ಥೆ ಆಯೋಜನೆ ಮಾಡಿತ್ತು.

ಕಳೆದ ಕೆಲವರುಷಗಳಿಂದ  ಪುತ್ತೂರಿನ ಹೃದಯಭಾಗದಲ್ಲಿರುವ ಜೋಸ್ ಆಲುಕ್ಕಾಸ್ ಜ್ಯುವೆಲ್ಲರಿ  ಚಿನ್ನಭರಣ ಪ್ರಿಯರಿಗೆ ಹೊಸತನದ ಖರೀದಿಗೆ ಅವಕಾಶ ಕಲ್ಪಿಸುತ್ತಿದ್ದು ಒಂದಲ್ಲ ಒಂದು ಹಬ್ಬದ‌ ಪ್ರಯುಕ್ತ ವಿಶೇಷ ಆಫರ್, ರಿಯಾಯಿತಿ ಮಾರಾಟಗಳ ಮೂಲಕ ವೈಶಿಷ್ಟ್ಯಮಯ ಚಿನ್ನಾಭರಣಗಳನ್ನು ಗ್ರಾಹಕರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ.

LEAVE A REPLY

Please enter your comment!
Please enter your name here