ಪುತ್ತೂರು:ಕಳೆದ ಮಾರ್ಚ್ 29ರಂದು ನಡೆದ ಲಯನ್ಸ್ ಪ್ರಾಂತೀಯ ಸಮ್ಮೇಳನ ಹೇಮಾಂತರಂಗದಲ್ಲಿ ಸನ್ಮಾನ ಗೊಳ್ಳಲಿದ್ದ ಅನಿವಾಸಿ ಭಾರತೀಯ ಉದ್ಯಮಿ ಮಿತ್ರ೦ಪಾಡಿ ಜಯರಾಮ ರೈಯವರಿಗೆ ಲಯನ್ಸ್ ಪ್ರಾಂತೀಯ ಅಧ್ಯಕ್ಷ ಹೇಮನಾಥ್ ಶೆಟ್ಟಿ ಕಾವು ನೇತೃತ್ವದಲ್ಲಿ ತಿಂಗಳಾಡಿ ರಾಮಯ್ಯ ರೈಗಳ ಮನೆಯಲ್ಲಿ ಸನ್ಮಾನಿಸಲಾಯಿತು.
ಸನ್ಮಾನಕ್ಕೆ ಉತ್ತರವಾಗಿ ಜಯರಾಮ ರೈಗಳು ಪುತ್ತೂರಿನಲ್ಲಿ ನನ್ನ ಸಾಮಾಜ ಸೇವೆಯನ್ನು ಗುರುತಿಸಿ ಹುಟ್ಟೂರ ಸನ್ಮಾನವಾಗಿ ನನ್ನ ಹಿತೈಷಿ ಬಂಧುಗಳು ಸನ್ಮಾನಿಸುತ್ತಿರುವುದು ನನಗೆ ಹೆಮ್ಮೆಯ ವಿಚಾರ, ಮುಂದಿನ ದಿನಗಳಲ್ಲಿ ಉತ್ತಮ ಸಮಾಜ ನಿರ್ಮಾಣಕ್ಕಾಗಿ ತನ್ನಿಂದಾಗುವ ಸಂಪೂರ್ಣ ಸಹಕಾರವನ್ನು ನೀಡುತ್ತೇನೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅನಿತಾ ಹೇಮನಾಥ್ ಶೆಟ್ಟಿ, ಆಲಡ್ಕ ಶ್ರೀ ಸದಾಶಿವ ದೇವಸ್ಥಾದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಶೀನಪ್ಪ ರೈ ಕೊಡೆ೦ಕಿರಿ,ರಾಮಯ್ಯ ರೈ ದಂಪತಿಗಳು,ಹರಿಪ್ರಸಾದ್ ರೈತಿಂಗಳಾಡಿ, ಶಿಲ್ಪಾ ಹರಿಪ್ರಸಾದ್ ರೈ,ಪುತ್ತೂರ್ದ ಮುತ್ತು ಲಯನ್ಸ್ ಕ್ಲಬ್ ಕಾರ್ಯದರ್ಶಿ ಲಯನ್ ರವಿಪ್ರಸಾದ್ ಶೆಟ್ಟಿ,ಸಮ್ಮೇಳನಧ್ಯಕ್ಷ ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ,ಆಳ್ವಾಸ್ ನ್ಯಾಯಚುರೋಪತಿ ವೈದ್ಯಕೀಯ ಸಂಸ್ಥೆಯ ಪ್ರಾಂಶುಪಾಲೆ ಡಾ. ವನಿತಾ ಸುಧಾಕರ್ ಶೆಟ್ಟಿ, ಸರಿತಾ ಸಂದೀಪ್ ರೈ, ಮನೋಹರ್ ರೈ ಪಟ್ಟೆ,ರಮಾನಾಥ್ ರೈ ಬಜ್ಪೆ, ಶ್ರೀಕಾಂತ್ ರೈ,ಶಿವಪ್ರಸಾದ್ ರೈ ನಂಜೆ,ಪ್ರತಿಮಾ ರೈ ಬನ್ನೂರುಮೊದಲಾದವರು ಉಪಸ್ಥಿತರಿದ್ದರು.