ಮೇ.10 : ಸಂಪ್ಯ ನಾಗಮಂಡಲೋತ್ಸವಕ್ಕೆ ಹೊರೆಕಾಣಿಕೆ ಮೆರವಣಿಗೆ

0

  • ಹಿಂಗಾರ ಸಮರ್ಪಣೆಗೆ ಭಕ್ತಾದಿಗಳಿಗೆ ಮನವಿ

ಪುತ್ತೂರು:ಸಂಪ್ಯ ಮರಕ್ಕ ಚಾಮುಂಡಿ ದೈವಸ್ಥಾನದ ವತಿಯಿಂದ ಮೇ.10ರಂದು ಸಂಪ್ಯ ಉದಯಗಿರಿ ಶ್ರೀವಿಷ್ಣುಮೂರ್ತಿ, ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆಯಲಿರುವ ನಾಗಮಂಡಲೋತ್ಸವದ ಹೊರೆಕಾಣಿಕೆ ಸಮರ್ಪಣೆಯು ಮೇ.8ರಂದು ನಡೆಯಲಿದೆ.

ಹೊರೆಕಾಣಿಕೆಯು ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಬಳಿಯಲ್ಲಿ ಸಂಗ್ರಹಗೊಂಡು ಸಂಜೆ 3 ಗಂಟೆಗೆ ಮೆರವಣಿಗೆಯ ಮೂಲಕ ಸಂಪ್ಯ ನಾಗಮಂಡಲೋತ್ಸವ ನಡೆಯುವ ಉದಯಗಿರಿಗೆ ಆಗಮಿಸಲಿದೆ.

ಹಿಂಗಾರ ಸಮರ್ಪಣೆಗೆ ಮನವಿ:
ನಾಗಮಂಡಲೋತ್ಸವಕ್ಕೆ ಹಿಂಗಾರದ ಆವಶ್ಯಕತೆಯಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಿಂಗಾರವನ್ನು ಹೊರೆಕಾಣಿಕೆ ಮೂಲಕ ಅಥವಾ ಸಂಪ್ಯ ಅನ್ನಪೂರ್ಣೇಶ್ವರಿ ಕ್ಷೇತ್ರಕ್ಕೆ ತಲುಪಿಸುವುದು. ಹೆಚ್ಚಿನ ಮಾಹಿತಿಗಾಗಿ 9845113323, 9741316353 ನಂಬರನ್ನು ಸಂಪರ್ಕಿಸುವಂತೆ ನಾಗಮಂಡಲೋತ್ಸವ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here