ಕಡಬ ಕಸಾಪದಿಂದ ಟಿ.ಜಿ.ಮುಡೂರುಗೆ ನುಡಿನಮನ

0

ರಾಮಕುಂಜ: ಇತ್ತೀಚೆಗೆ ನಿಧನರಾದ ಸಾಹಿತಿ, ಅಧ್ಯಾಪಕ, ಪ್ರಗತಿಪರ ಕೃಷಿಕ ಟಿ.ಜಿ.ಮುಡೂರು ಇವರಿಗೆ ಕನ್ನಡ ಸಾಹಿತ್ಯ ಪರಿಷತ್ತು ಕಡಬ ತಾಲೂಕು ಘಟಕದ ವತಿಯಿಂದ ನುಡಿನಮನ ಕಾರ್ಯಕ್ರಮ ರಾಮಕುಂಜ ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ಸಭಾಂಗಣದಲ್ಲಿ ಮೇ. 4ರಂದು ನಡೆಯಿತು.

 


ಕಸಾಪ ಕಡಬ ಘಟಕದ ನಿಕಟಪೂರ್ವ ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲುರವರು ಟಿ.ಜಿ.ಮುಡೂರುರವರ ಜೀವನ ಸಾಧನೆಯ ಗುಣಗಾನ ಮಾಡಿದರು. ಕಸಾಪ ಕಡಬ ತಾಲೂಕು ಘಟಕದ ಅಧ್ಯಕ್ಷ ಕೆ.ಸೇಸಪ್ಪ ರೈಯವರು ಅಧ್ಯಕ್ಷತೆ ವಹಿಸಿದ್ದರು. ರಾಮಕುಂಜ ಮಹಾವಿದ್ಯಾಲಯದ ಪ್ರಾಂಶುಪಾಲ ಗಣರಾಜ ಕುಂಬ್ಳೆ, ಕ.ಸಾ.ಪ. ಪದಾಧಿಕಾರಿಗಳಾದ ಸತೀಶ್ ನಾಯಕ್, ವಸಂತ ಕುಮಾರ್ ಡಿ., ಬಾಲಚಂದ್ರ ಮುಚ್ಚಿಂತಾಯ, ಪುಷ್ಪಾವತಿ, ಗ್ರೇಸಿ ಪಿಂಟೋ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಮಕುಂಜ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕಿ ಸುರಕ್ಷಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here