ತೋಟದಮೂಲೆ ಸಂಗಮ್ ನಿಲಯದಲ್ಲಿ ದೈವ ಪ್ರತಿಷ್ಠೆ, ನೇಮೋತ್ಸವ

0

 

 

ಬೆಟ್ಟಂಪಾಡಿ: ಇಲ್ಲಿನ ತೋಟದಮೂಲೆ ಸಂಗಮ್ ನಿಲಯ ನುಳಿಯಾಲು ಸೀತಾರಾಮ ರೈಯವರ ಮನೆಯಲ್ಲಿ ದೈವ ಪ್ರತಿಷ್ಠೆ ಮತ್ತು ನೇಮೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮೇ. 5 ರಂದು ಜರಗಿತು. ಬೆಳಿಗ್ಗೆ ವೇ.ಮೂ. ರಾಧಾಕೃಷ್ಣ ಭಟ್ ಕಕ್ಕೂರು ರವರ ನೇತೃತ್ವದಲ್ಲಿ ಶ್ರೀ ಮಹಾಗಣಪತಿ ಹೋಮ, ಪ್ರತಿಷ್ಠಾ ಹೋಮ, ಶ್ರೀ ಕುಪ್ಪೆಪಂಜುರ್ಲಿ ದೈವದ ಪ್ರತಿಷ್ಠೆ, ಅಭಿಷೇಕ, ಪರ್ವಸೇವೆ, ಬಳಿಕ ಶ್ರೀ ಸತ್ಯನಾರಾಯಣ ಪೂಜೆ ನಡೆದು ಪ್ರಸಾದ ವಿತರಣೆ ನಡೆಯಿತು. ಸಂಜೆ ಶ್ರೀ ಕುಪ್ಪೆ ಪಂಜುರ್ಲಿ ದೈವದ ಭಂಡಾರ ತೆಗೆದ ಬಳಿಕ ಶ್ರೀ ಸಿದ್ಧಿವಿನಾಯಕ ಮಹಿಳಾ ಭಜನಾ ಸಂಘ, ವಿನಾಯಕನಗರ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ರಾತ್ರಿ ಅನ್ನಸಂತರ್ಪಣೆ ಬಳಿಕ ಶ್ರೀ ಕುಪ್ಪೆ ಪಂಜುರ್ಲಿ ಮತ್ತು ಪಾಷಾಣಮೂರ್ತಿ ದೈವಗಳ ನೇಮೋತ್ಸವ ನಡೆಯಿತು. ತೋಟದಮೂಲೆ ಮನೆಯವರು ಮತ್ತು ಬಂಧು ಮಿತ್ರರು ಪಾಲ್ಗೊಂಡರು.

\ \ \ \

LEAVE A REPLY

Please enter your comment!
Please enter your name here