ಕರುವೇಲು ಶ್ರೀರಾಮ ಭಜನಾ ಮಂದಿರದಲ್ಲಿ ನೃತ್ಯ ತರಬೇತಿ ಕೇಂದ್ರ ಉದ್ಘಾಟನೆ

0

ಪುತ್ತೂರು: ಕರುವೇಲು ಶ್ರೀ ರಾಮ ಭಜನಾ ಮಂದಿರದಲ್ಲಿ ಭಜನಾ ಮಂಡಳಿಯ ಭಜನಾರ್ತಿ ನಾಗವೇಣಿರವರ ನೃತ್ಯ ತರಬೇತಿ ಕೇಂದ್ರ ಮೇ 4ರಂದು ಆರಂಭಗೊಂಡಿದೆ. ತರಬೇತಿ ಕೇಂದ್ರವನ್ನು ಮಂದಿರದ ಉಪಾಧ್ಯಕ್ಷೆ ಲಲಿತ ರೋಹಿತ್ ಬಾಣಬೆಟ್ಟುರವರು ಉದ್ಘಾಟಿಸಿ ಶುಭ ಹಾರೈಸಿದರು. ಮಂದಿರದ ಅದ್ಯಕ್ಷ ಕುಶಾಲಪ್ಪ ಹತ್ತುಕಲಸೆ ಮತ್ತು ಕಳೆಂಜ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಸಮಿತಿಯ ಸದಸ್ಯ ಸುರೇಶ್ ಆಚಾರ್ಯ ಕೆಳಗಿನಮನೆ ಶುಭ ಕೋರಿದರು. ಮಂದಿರದ ಕಾರ್ಯದರ್ಶಿ ಪ್ರಸಾದ್ ಸುಪ್ರಭ ಹಾಗೂ ಮಂದಿರದ ಅರ್ಚಕ ಲೋಕೇಶ್ ಮಾಡತ್ತಾರು ಉಪಸ್ಥಿತರಿದ್ದರು. ಭಜನಾ ತರಬೇತುದಾರಾದ ನಾಗವೇಣಿರವರಿಗೆ ಅವರ ತಂದೆ ಮೋನಪ್ಪ ನಾಯ್ಕ ಮತ್ತು ತಾಯಿ ವಿದ್ಯಾರವರು ಕಾಲ್ಗೆಜ್ಜೆ ನೀಡಿ ಆಶೀರ್ವದಿಸಿದರು. ಪ್ರತಿ ಭಾನುವಾರ ಮಧ್ಯಾಹ್ನ 2ರಿಂದ ಸಂಜೆ 5ರ ತನಕ ಸಾಂಪ್ರದಾಯಿಕ ನ್ರತ್ಯ ತರಬೇತಿ ನಡೆಯಲಿದೆ.

LEAVE A REPLY

Please enter your comment!
Please enter your name here