ಕಡಬ: ಉಪನ್ಯಾಸಕರೋರ್ವರು ಚಲಾಯಿಸುತ್ತಿದ್ದ ಕಾರು ಕಡಬ ಮೆಸ್ಕಾಂ ಸಮೀಪ ಮರಕ್ಕೆ ಗುದ್ದಿದ ಪರಿಣಾಮ ಉಪನ್ಯಾಸಕರು ಗಾಯಗೊಂಡ ಘಟನೆ ಮೇ.6ರಂದು ನಡೆದಿದೆ. ಕಡಬ ಸ.ಪ.ಪೂ.ಕಾಲೇಜಿನ ಉಪನ್ಯಾಸಕ ವಾಸುದೇವ ಕೋಲ್ಪೆರವರು ಚಲಾಯಿಸುತ್ತಿದ್ದ ಕಾರು ಕಡಬ ಮೆಸ್ಕಾಂ ಸಮೀಪ ರಸ್ತೆ ಬದಿಯ ಮರಕ್ಕೆ ಗುದ್ದಿ ಕಾರು ಜಖಂಗೊಂಡಿದೆ. ವಾಸುದೇವರವರಿಗೆ ರಕ್ತದೊತ್ತಡ ಹೆಚ್ಚಿದ ಪರಿಣಾಮ ಅಪಘಾತ ನಡೆದಿದೆ ಎಂದು ತಿಳಿದು ಬಂದಿದೆ.