ಬಪ್ಪಳಿಗೆ ರಾಗಿಕುಮೇರಿ ಮಾರಿಯಮ್ಮ ಸಪರಿವಾರ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಹೊರೆಕಾಣಿಕೆ

0

ಪುತ್ತೂರು: ಬಪ್ಪಳಿಗೆ ರಾಗಿಕುಮೇರಿ ಶ್ರೀಮಾರಿಯಮ್ಮ ಮತ್ತು ಸಪರಿವಾರ ದೈವಗಳ ದೈವಸ್ಥಾನದಲ್ಲಿ ಮೇ.7 ರಿಂದ 11ರವರೆಗೆ ನಡೆಯಲಿರುವ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಮಾರಿ ಪೂಜೆಯ ಅಂಗವಾಗಿ ಮೇ.7ರಂದು ಸಂಜೆ ಹೊರೆಕಾಣಿಕೆ ಮೆರವಣಿಗೆ ನಡೆಯಿತು.


ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಿಂದ ಹೊರಟ ಮೆರವಣಿಗೆಗೆ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ನ್ಯಾಯವಾದಿ ಎನ್.ಕೆ ಜಗನ್ನಿವಾಸ ರಾವ್ ತೆಂಗಿನಕಾಯಿ ಒಡೆದು ಚಾಲನೆ ನೀಡಿದರು. ದೇವಸ್ಥಾನದ ಅರ್ಚಕ ಹರೀಶ್ ಭಟ್ ಪ್ರಾರ್ಥನೆ ಸಲ್ಲಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಭಾಸ್ಕರ ನೆಲ್ಲಿಗುಂಡಿ, ಪ್ರಧಾನ ಕಾರ್ಯದರ್ಶಿ ನಂದಕುಮಾರ್ ಭಕ್ತಕೋಡಿ, ಕೋಶಾಧಿಕಾರಿ ಮೋಹನ ನೆಲ್ಲಿಗುಂಡಿ, ಜತೆ ಕಾರ್ಯದರ್ಶಿ ಜಯಲಕ್ಷ್ಮೀ ಬಪ್ಪಳಿಗೆ, ಸಂಚಾಲಕರಾದ ಸಂಜೀವ ನೆಲ್ಲಿಗುಂಡಿ, ರವಿಚಂದ್ರ ಆಚಾರ್ಯ ಸಂಪ್ಯ, ಬಾಲಚಂದ್ರ ದರ್ಖಾಸ್, ದಯಾನಂದ ನೆಲ್ಲಿಗುಂಡಿ, ಸದಾಶಿವ, ವಸಂತ, ಸುರೇಶ್, ಮೋನಪ್ಪ ನೆಲ್ಲಿಗುಂಡಿ, ಲೋಲಾಕ್ಷ ಬಪ್ಪಳಿಗೆ ಸೇರಿದಂತೆ ಹಲವು ಮಂದಿ ಭಾಗವಹಿಸಿದ್ದರು. ಮೆರವಣಿಗೆಯು ದೇವಸ್ಥಾನದ ಬಳಿಯಿಂದ ಹೊರಟು ಮುಖ್ಯರಸ್ತೆ ಶ್ರೀಧರ ಭಟ್ ಅಂಗಡಿ ಬಳಿಯಿಂದಾಗಿ ಬಪ್ಪಳಿಗೆ ಬೈಪಾಸ್ ಮಾರ್ಗವಾಗಿ ಸಾಗಿ ರಾಗಿಕುಮೇರಿ ದೈವಸ್ಥಾನದ ವಠಾರದಲ್ಲಿ ಸಮಾಪನಗೊಂಡಿತು.

LEAVE A REPLY

Please enter your comment!
Please enter your name here