ಕಾವು: ಬಿಜೆಪಿ ಮಾಡ್ನೂರು ಶಕ್ತಿ ಕೇಂದ್ರದ ಸಂಘಟನಾತ್ಮಕ ಸಭೆ

0

 

ಕಾವು:ಭಾರತೀಯ ಜನತಾ ಪಾರ್ಟಿ ಮಾಡ್ನೂರು ಶಕ್ತಿಕೇಂದ್ರದ ಸಂಘಟನಾತ್ಮಕ ಸಭೆಯು ಬಿಜೆಪಿ ಪುತ್ತೂರು ಗ್ರಾ.ಮಂಡಲ ಅಧ್ಯಕ್ಷ ಶ್ರೀ ಸಾಜ ರಾಧಾಕೃಷ್ಣ ಆಳ್ವ ಅವರ ಅಧ್ಯಕ್ಷತೆಯಲ್ಲಿ ನನ್ಯ ಜನಮಂಗಳ ಸಭಾಭವನದಲ್ಲಿ ಮೇ. 6ರಂದು ನಡೆಯಿತು.

 


ಸಭೆಯಲ್ಲಿ ಪಕ್ಷ ಸಂಘಟನೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನಪರ ಯೋಜನೆಗಳನ್ನು ಪ್ರತಿ ಮನೆ ಮನೆಗೆ ತಲುಪಿಸುವುದರ ಮುಂತಾದ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ ನಿತೀಶ್ ಕುಮಾರ್ ಶಾಂತಿವನ ಮಂಡಲದ ಉಪಾಧ್ಯಕ್ಷರಾದ ಮೀನಾಕ್ಷಿ ಮಂಜುನಾಥ್, ಕಾರ್ಯದರ್ಶಿ ಲೋಹಿತ್ ಆಮ್ಚಿನಡ್ಕ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಮೀನಾಕ್ಷಿ ಶಾಂತಿಗೋಡು, ನೆಟ್ಟಣಿಗೆ ಮುಡ್ನೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಿಜಯಕುಮಾರ್ ರೈ ಕೊರಂಗ ಕಾರ್ಯದರ್ಶಿ ತೀರ್ಥನಂದ ದುಗ್ಗಳ ಅರಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸೌಮ್ಯ ಬಾಲಸುಬ್ರಹ್ಮಣ್ಯ ಮುಂಡಕೊಚ್ಚಿ, ಮಾಡ್ನೂರು ಶಕ್ತಿ ಕೇಂದ್ರದ ಸಂಚಾಲಕರು ಲೋಕೇಶ್ ಚಾಕೋಟೆ,ಮಾಡ್ನೂರು ಹಾಲು ಉತ್ಪಾದಕರ ಸಹಕಾರಿ ಸಂಘ ದ ಅಧ್ಯಕ್ಷರು ಕೃಷ್ಣ ಪ್ರಸಾದ್ ಕೊಚ್ಚಿ,ಬಿಜೆಪಿ ಸಾಂಸ್ಕೃತಿಕ ಪ್ರಕೋಷ್ಠ ದ ಸಂಚಾಲಕರು ಭಾಸ್ಕರ ಬಲ್ಯಾಯ ಕಾವು,ಯುವ ಮೋರ್ಚಾ ಗ್ರಾಮಾಂತರ ಮಂಡಲದ  ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಕಾವು, ಗ್ರಾಮ ಪಂಚಾಯತ್ ಸದಸ್ಯರಾದ ವಿಜಿತ್ ಕೆರೆಮಾರು, ನಾರಾಯಣ ಆಚಾರ್ಯ ಮಳಿ, ರಾಮಣ್ಣ ನಾಯ್ಕ ಆಚಾರಿಮೂಲೆ, ರಮೇಶ್ಚಂದ್ರ ಮುಂಡಕೊಚ್ಚಿ, ಹೊನ್ನಪ್ಪ ಪೂಜಾರಿ ಪಿಲಿಪಂಜರ,ಸೀತಾರಾಮ ಮೇಲ್ಪದೆ, ಶಿವಪ್ರಸಾದ್ ಕೊಚ್ಚಿ, ಶಾಂತಾ ಜೆ ರೈ, ಸಂಕಪ್ಪ ಪೂಜಾರಿ, ಸುನೀಲ್ ಎನ್, ಪ್ರವೀಣ್ ಪಳನೀರು, ಹರೀಶ್, ಉಮೇಶ್ ಮಾಡನ್ನೂರು, ಅಜಿತ್ ಮಿನೊಜಿಕಲ್, ಚಿದಾನಂದ ಮಾಣಿಯಡ್ಕ, ಧರ್ಮಲಿಂಗ, ಸಂದೇಶ್ ಚಾಕೋಟೆ, ಪ್ರಜ್ವಲ್ ಕೆರೆಮಾರು ಗಣೇಶ್ ಪೂವಂದುರು ಉಪಸ್ಥಿತರಿದ್ದರು.  ಕಾರ್ಯಕ್ರಮವನ್ನು ಶಕ್ತಿ ಕೇಂದ್ರ ಸಂಚಾಲಕರು ಲೋಕೇಶ್ ಚಾಕೋಟೆ ಸ್ವಾಗತಿಸಿ, ಯುವ ಮೋರ್ಚಾ ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಕಾವು ವಂದಿಸಿದರು.

 

LEAVE A REPLY

Please enter your comment!
Please enter your name here