ಪುತ್ತೂರು : ಬ್ರಹ್ಮನಗರದ ನಡುಮುಂದಿಲು ಶ್ರೀದುರ್ಗಾಮಾರಿಯಮ್ಮನವರ ವಾರ್ಷಿಕ ಉತ್ಸವ ಎ.29ರಿಂದ ಮೇ.6ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಮೇ.5ರಂದು ಅಗ್ನಿಸ್ಪರ್ಶ, ಅಗ್ನಿಸೇವೆ, ಅಮ್ಮನರ ಭಂಡಾರ ಏರುವುದು ನಡೆಯಿತು. ಮೇ.6ರಂದು ಮಧ್ಯಾಹ್ನ ಮಹಾಪೂಜೆ, ವಾರ್ಷಿಕ ಮಾರಿಪೂಜೆ, ಶ್ರೀಅಮ್ಮನವರ ದರ್ಶನ, ಪಿಲಿಚಾಮುಂಡಿ, ಕಲ್ಲುರ್ಟಿ, ಕರೀಚಾಮುಂಡಿ, ಮಾಯಂದಾಳ್, ಜುಮಾದಿ ಬಂಟ ದೈವಗಳ ದರ್ಶನ, ಧರ್ಮದೈವ ಅಣ್ಣಪ್ಪ ಮತ್ತು ಗುಳಿಗ, ಕೊರಗಜ್ಜ ಸತ್ಯಸಾರಮಣಿ ದೈವಗಳ ದರ್ಶನ, ಕೇಳಿಕೆ ಸ್ವೀಕಾರ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಆಡಳಿತ ಮೊಕ್ತೇಸರ ಶೇಖರ ಪಿ., ಅಧ್ಯಕ್ಷ ಅಶೋಕ್ ಪಿ.ಎಸ್., ಸಮಿತಿ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.