ಪಂಜ: ದಿವಂಗತ ಟಿ.ಜಿ.ಮುಡೂರು ರವರಿಗೆ ನುಡಿನಮನ-ವೈಕುಂಠ ಸಮಾರಾಧನೆ

0

 

 

ಪುತ್ತೂರು: ಹಿರಿಯ ಸಾಹಿತಿ ವಿದ್ವಾನ್ ಟಿ.ಜಿ.ಮುಡೂರು ರವರು ಎ.20 ರಂದು ನಿಧನರಾಗಿದ್ದು ಅವರಿಗೆ ನುಡಿ ನಮನ ಮತ್ತು ವೈಕುಂಠ ಸಮಾರಾಧನೆ ಕಾರ್ಯಕ್ರಮ ಮೇ.8 ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಜರುಗಿತು. ಡಾ|ನರೇಂದ್ರ ರೈ ದೇರ್ಲ,ಡಾ|ಸುಂದರ ಕೇನಾಜೆ, ರಾಧಾಕೃಷ್ಣ ಕಲ್ಚಾರ್, ಜಾಕೆ ಮಾಧವ ಗೌಡ , ಚಿನ್ನಪ್ಪ ಸಂಕಡ್ಕ, ಶಶಿಧರ ಪಳಂಗಾಯ, ಚಂದ್ರಶೇಖರ ಪೇರಾಲು, ಡಾ|ಚಿನ್ನಪ್ಪ ಗೌಡ,ಡಾ.ಯು.ಪಿ.ಶಿವಾನಂದ ರವರು ನುಡಿ ನಮನ ಸಲ್ಲಿಸಿದರು. ಇದೇ ವೇಳೆ ಅವರ ಬದುಕು ಬರಹ ನುಡಿ ಚಿತ್ರ ಪ್ರದರ್ಶನ ಗೊಂಡಿತು. ಟಿ.ಜಿ.ಮುಡೂರು ರವರ ಪುತ್ರ ಸವಿತಾರ ಮುಡೂರು , ಪುತ್ರಿಯರಾದ ಶ್ರೀಮತಿ ಶೋಭಾ ಶಿವಾನಂದ ಊರುಬೈಲು, ಶ್ರೀಮತಿ ಗೀತಾ ಪುಂಡರಿಕ ಅಡ್ಪಂಗಾಯ,ಡಾ. ಮಮತಾ ಕಿರಣ್ ಉಳುವಾರು, ಸೊಸೆ, ಅಳಿಯಂದಿರು, ಮೊಮ್ಮಕ್ಕಳು ,
ಕುಟುಂಬಸ್ಥರು, ಬಂಧು ಮಿತ್ರರು ಉಪಸ್ಥಿತರಿದ್ದು , ಮೌನ ಪ್ರಾರ್ಥನೆ ಸಲ್ಲಿಸಿ,ಮೃತರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.ಕಾರ್ಯಕ್ರಮವನ್ನು ದುರ್ಗಾ ಕುಮಾರ್ ನಾಯರ್ ಕೆರೆ ನಿರೂಪಿಸಿದರು. ಸವಿತಾರ ಮುಡೂರು ವಂದಿಸಿದರು.ಕಾರ್ಯಕ್ರಮವು ಸುದ್ದಿ ಚಾನೆಲ್ ನಲ್ಲಿ ನೇರ ಪ್ರಸಾರ ನಡೆಯಿತು.

LEAVE A REPLY

Please enter your comment!
Please enter your name here