ಸಂಪ್ಯ ನಾಗಮಂಡಲೋತ್ಸವಕ್ಕೆ ಹೊರೆಕಾಣಿಕೆ ಮೆರವಣಿಗೆ

0

ಪುತ್ತೂರು:ಸಂಪ್ಯ ಮರಕ್ಕ ಚಾಮುಂಡಿ ದೈವಸ್ಥಾನದ ವತಿಯಿಂದ ಮೇ.೧೦ರಂದು ಸಂಪ್ಯ ಉದಯಗಿರಿ ಶ್ರೀವಿಷ್ಣುಮೂರ್ತಿ, ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆಯಲಿರುವ ನಾಗಮಂಡಲೋತ್ಸವದ ಹೊರೆಕಾಣಿಕೆ ಸಮರ್ಪಣೆಯು ಮೇ.೮ರಂದು ನಡೆಯಿತು.

ಹೊರೆಕಾಣಿಕೆಯು ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಸಂಗ್ರಹಗೊಂಡು ಸಂಜೆ ಮೆರವಣಿಗೆಯ ಮೂಲಕ ಸಂಪ್ಯ ನಾಗಮಂಡಲೋತ್ಸವ ನಡೆಯುವ ಉದಯಗಿರಿಗೆ ಆಗಮಿಸಿತು. ದೇವಸ್ಥಾನದ ಬಳಿಯಿಂದ ಹೊರಟ ಮೆರವಣಿಗೆಗೆ ತೆಂಗಿನಕಾಯಿ ಒಡೆದು ಚಾಲನೆ ನೀಡಿದರು. ಬಳಿಕ ಮುಖ್ಯ ರಸ್ತೆಯ ಮೂಲಕ ಸಾಗಿ ಸಂಪ್ಯ ತನಕ ಮೆರವಣಿಗೆ ಮೂಲಕ ಸಾಗಿತು. ನಾಗಮಂಡಲೋತ್ಸವ ಸಮಿತಿ ಅಧ್ಯಕ್ಷ ಜಯಂತ ಶೆಟ್ಟಿ ಕಂಬಳತ್ತಡ್ಡ, ಪ್ರಧಾನ ಕಾರ್ಯದರ್ಶಿ ರಾಜೇಶ್ ಬನ್ನೂರು, ಕಾರ್ಯಾಧ್ಯಕ್ಷರಾದ ನರೇಂದ್ರನಾಥ್ ನಾಯಕ್ ಮರಕ್ಕ, ರಕ್ಷಿತ್ ನಾಯಕ್ ಮರಕ್ಕ, ಧನಂಜಯ ಸೇರಿದಂತೆ ಹಲವು ಮಂದಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here