ದಿ. ಸಿ.ಪಿ.ಜಯರಾಮರ ಸಹೋದರಿ ಪಾರ್ವತಿ ಪೋಳಾಜೆ ನಿಧನ

0

ಪುತ್ತೂರು:  ಮುರುಳ್ಯ ಗ್ರಾಮದ ಪೋಳಾಜೆ ದಿ. ಬೆಳ್ಯಪ್ಪ ಗೌಡರ ಪತ್ನಿ ಶ್ರೀಮತಿ ಪಾರ್ವತಿಯವರು ಮೇ. 8ರಂದು ಮಧ್ಯಾಹ್ನ ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 89 ವರ್ಷ ವಯಸ್ಸಾಗಿತ್ತು.

ಸಹಕಾರಿ ಧುರೀಣರಾಗಿದ್ದ ದಿ. ಸಿ.ಕೆ. ಪದ್ಮಯ್ಯ ಗೌಡರ ಪುತ್ರಿ ಹಾಗೂ ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿ. ಸಿ.ಪಿ.ಜಯರಾಮರ ಸಹೋದರಿಯಾಗಿದ್ದ ಪಾರ್ವತಿಯವರು ಹೋಮಿಯೋಪತಿ ಅಧ್ಯಯನ ಮಾಡುತ್ತಾ, ಔಷಧಿ ನೀಡುತ್ತಾ ಜನಾನುರಾಗಿಯಾಗಿದ್ದರು. ಕೊಡುಗೈದಾನಿಯಾಗಿದ್ದರು. ದೇವರಕಾನ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದ ಸ್ಥಳದಾನಿಯಾಗಿದ್ದರು.

ಮೃತರು ಪುತ್ರರಾದ ಎಂ.ಬಿ. ವಸಂತಕುಮಾರ್ ಬೆಂಗಳೂರು, ಎಂ.ಬಿ.ಲೋಕೇಶ್ ಮುರುಳ್ಯ, ಎಂ.ಬಿ.ಸುರೇಶ್‌ಕುಮಾರ್, ಎಂ.ಬಿ.ದಿವೀಶ್‌ಕುಮಾರ್, ಎಂ.ಬಿ.ದಿನೇಶ್‌ಕುಮಾರ್, ಪುತ್ರಿಯರಾದ ಶ್ರೀಮತಿ ದುರ್ಗಾದೇವಿ ಗೋವಿಂದ ಮುಂಗ್ಲಿಮನೆ, ಶ್ರೀಮತಿ ಭಾಗ್ಯಲಕ್ಷ್ಮಿ ದಿವಾಕರ ಹೆಗ್ಡೆ ಶಿವಮೊಗ್ಗ, ಸೊಸೆಯಂದಿರಾದ ಶ್ರೀಮತಿ ವಾಣಿ ವಸಂತಕುಮಾರ್, ಶ್ರೀಮತಿ ಹೇಮಲತಾ ಸುರೇಶ್‌ಕುಮಾರ್, ಶ್ರೀಮತಿ ಮೀನಾಕ್ಷಿ ದಿನೇಶ್‌ಕುಮಾರ್, ಶ್ರೀಮತಿ ನಯನ ದಿವೀಶ್‌ಕುಮಾರ್, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here