ಆಲಂಕಾರು ಬುಡೇರಿಯಾ ರಸ್ತೆ ಕಾಂಕ್ರೀಟಿಕರಣಕ್ಕೆ ಗುದ್ದಲಿ ಪೂಜೆ

0

ಆಲಂಕಾರು: ಆಲಂಕಾರು ಗ್ರಾಮದ ಬುಡೇರಿಯಾ ಕಾಲೋನಿ ರಸ್ತೆ ರೂ.30 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್‌ಕರಣಗೊಳ್ಳಲಿದ್ದು ಇದರ ಗುದ್ದಲಿ ಪೂಜೆ ನಡೆಯಿತು. ಸುಳ್ಯ ವಿಧಾನ ಸಭಾಕ್ಷೇತ್ರದ ಶಾಸಕ ಹಾಗೂ ಸಚಿವ ಅಂಗಾರ ಎಸ್.ರವರು ಗುದ್ದಲಿ ಪೂಜೆ ನೇರವೆರಿಸಿ ಮಾತನಾಡಿ ರಸ್ತೆ ಕಾಮಗಾರಿಯು ಸುಸೂತ್ರವಾಗಿ ನಡೆದು ಈ ಭಾಗ ಅಭಿವೃದ್ದಿಯೊಂದಿಗೆ ಜನರು ಕೂಡ ಅಭಿವೃದ್ದಿಗೊಳ್ಳಲಿ ಎಂದು ಹೇಳಿ ಶುಭಹಾರೈಸಿದರು. 

ದ.ಕ ಜಿಲ್ಲಾ ಬಿ.ಜೆ.ಪಿ ಪ್ರಶಿಕ್ಷಣ ಪ್ರಕೋಷ್ಠದ ಸಂಚಾಲಕ ಕೃಷ್ಣ ಶೆಟ್ಟಿ ಕಡಬ, ಸುಳ್ಯಮಂಡಲ ಬಿ.ಜೆ.ಪಿ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಎಸ್.ಟಿ ಮೋರ್ಚದ ಪ್ರದಾನ ಕಾರ್ಯದರ್ಶಿ ಪೂವಪ್ಪ ನಾಯ್ಕ್ ಎಸ್., ವೃತ್ತಿಪರ ಪ್ರಕೋಷ್ಠದ ಸಂಚಾಲಕ ಸದಾಶಿವ ಶೆಟ್ಟಿ ಮಾರಂಗ, ಸುಳ್ಯ ಮಂಡಲ ಸಮಿತಿ ಸದಸ್ಯರಾದ ದಯಾನಂದ ಆಲಡ್ಕ, ಕೊಯಿಲ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಪ್ರದೀಪ್ ರೈ ಮನವಳಿಕೆ, ಕಾರ್ಯದರ್ಶಿ ಸುರೇಶ್ ಗೌಡ ದೇಂತಾರು, ಆಲಂಕಾರು ಗಾ.ಪಂ ಅಧ್ಯಕ್ಷರಾದ ಸದಾನಂದ ಆಚಾರ್ಯ, ಬುಡೇರಿಯಾ ಶ್ರೀಉಳ್ಳಾಲ್ತಿ ಉಳ್ಳಾಕ್ಲು ದೈವಸ್ಥಾನದ ಅಡಳಿತ ಪ್ರಮುಖರಾದ ಈಶ್ವರ ಗೌಡ ಪಜ್ಜಡ್ಕ, ಸಂಕಪ್ಪ ಗೌಡತ್ತಿಗೆ, ಪ್ರಮುಖರಾದ ಜನಾರ್ಧನ ಗೌಡ ಕಯ್ಯಪೆ, ಅಶೋಕ ಗೌಡ ಪಜ್ಜಡ್ಕ, ಗಣೇಶ್ ಗೌಡತಿಗೆ, ಗ್ರಾ.ಪಂ. ಸದಸ್ಯರಾದ ಚಂದ್ರಶೇಖರ ಗೌಡ, ಸುನಂದಾ ಬಾರ್ಕುಲಿ, ಬೂತ್ ಸಮಿತಿ ಅಧ್ಯಕ್ಷರ ನವೀನ್ ಬುಡೇರಿಯಾ, ಕುಕ್ಕ ಪಜ್ಜಡ್ಕ, ಹರೀಶ್ ಏಂತಡ್ಕ, ಗ್ರಾ.ಪಂ ಮಾಜಿ ಸದಸ್ಯರಾದ ನಾಗವೇಣಿ ಪಜ್ಜಡ್ಕ, ಆನಂದ ಗೌಡ ಪಜ್ಜಡ್ಕ, ಪುಷ್ಪ ಸೊರಲ್ತಡಿ, ಜಯಶ್ರೀ ಪಜ್ಜಡ್ಕ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here