ಪುತ್ತೂರು: ಕೆಯ್ಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಎಸ್.ಬಿ.ಜಯರಾಮ ರೈಯವರು ದ.ಕ ಹಾಲು ಒಕ್ಕೂಟದ ಉಪಾಧ್ಯಕ್ಷರಾಗಿ ಹಾಗೂ ಪ್ರಭಾರ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಹಿನ್ನೆಲೆಯಲ್ಲಿ ಇವರಿಗೆ ಸಂಘದ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು. ಸಂಘದ ವತಿಯಿಂದ ಶಾಲು, ಹಾರ, ಸ್ಮರಣಿಕೆ,ಫಲಪುಷ್ಪ ನೀಡಿ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷೆ ದೇವಿಕಾ ಎ.ಎಸ್, ನಿರ್ದೇಶಕರುಗಳಾದ ಪದ್ಮನಾಭ ರೈ, ಗುಡ್ಡಪ್ಪ ರೈ, ವಿಜಯ, ಪದ್ಮನಾಭ ಪಿ.ಎಸ್, ಪ್ರವೀಣ, ಈಶ್ವರಿ ಜೆ.ರೈ, ಶಿವಪ್ಪ ನಾಯ್ಕ ಹಾಗೂ ಮಾಜಿ ಕಾರ್ಯದರ್ಶಿ, ಎ.ಐ ಕಾರ್ಯಕರ್ತ ಬಿ.ಚಂದ್ರಹಾಸ ರೈ ಬೊಳಿಕ್ಕಲ, ಸಂಘದ ಕಾರ್ಯದರ್ಶಿ ಭಾಸ್ಕರ ರೈ, ಸಿಬ್ಬಂದಿಗಳಾದ ಪ್ರಶಾಂತ್ ರೈ, ಪದ್ಮಯ್ಯ ಪಿ ಮತ್ತಿತರರು ಉಪಸ್ಥಿತರಿದ್ದರು.