ಕಣಿಯೂರಿನಲ್ಲಿ ಅಪ್ರಾಪ್ತ ಬಾಲಕಿಯ ಆತ್ಮಹತ್ಯೆ ಪ್ರಕರಣ-ನ್ಯಾಯಕ್ಕಾಗಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ವತಿಯಿಂದ ಕನ್ಯಾನದಲ್ಲಿ ಪ್ರತಿಭಟನೆ

0

 

  • ಧರ್ಮಕ್ಕೆ  ಅನ್ಯಾಯವಾದಾಗ ಎದ್ದುನಿಲ್ಲಬೇಕಾದ್ದು ಸ್ವಾಭಾವಿಕ ಸತ್ಯ: ಒಡಿಯೂರು ಶ್ರೀ
  • ಹಿಂದೂ ಸಮಾಜ ಒಗ್ಗಟ್ಟಾಗಿ ದುಷ್ಟ ಶಕ್ತಿಗಳನ್ನು ಸದೆಬಡಿಯಬೇಕು: ಮಾಣಿಲ ಶ್ರೀ
  • ಇಂತಹ ಘಟನೆಗಳು ನಡೆಯುವುದಕ್ಕಿಂತ ಮೊದಲೇ ನಾವು ಜಾಗೃತರಾಗಬೇಕಿದೆ: ಕಣಿಯೂರು ಶ್ರೀ
  • ನ್ಯಾಯಕ್ಕಾಗಿ  ಹಿಂದೂ ಸಂಘಟನೆಗಳು ಪ್ರತಿಭಟನೆಯ ಹೆಜ್ಜೆ ಇಟ್ಟಿದೆ: ಶರಣ್ ಪಂಪವೆಲ್

 

ವಿಟ್ಲ: ನಾವೊಂದು ಹೋರಾಟದಲ್ಲಿ ಭಾಗವಹಿಸುತ್ತಿದ್ದೇವೆ. ಇದು ಶಾಂತಿಯುತವಾದ ಒಂದು ಹೋರಾಟವಾಗಿದೆ. ನಮಗೆ ನ್ಯಾಯಸಿಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಸ್ವರೂಪ ಪಡೆಯಲಿದೆ. ಭಾರತ ದೇಶ ಅನ್ನುವಂತದ್ದು ವಿಶಾಲವಾಗಿರುವಂತದ್ದು, ನಮ್ಮ ಧರ್ಮಧ ಅನುಷ್ಠಾನಕ್ಕಿರು ಎಲ್ಲಾ ವಿಚಾರಗಳು ಇದರೊಳಗಿದೆ. ಧರ್ಮಕ್ಕೆ  ಅನ್ಯಾಯವಾದಾಗ ಎದ್ದುನಿಲ್ಲಬೇಕಾದ್ದು ಸ್ವಾಭಾವಿಕವಾಗಿ ಸತ್ಯವಾಗಿದೆ. ಇವತ್ತು ನಮ್ಮ ಪಕ್ಕದಲ್ಲೇ ಇರುವ ಅಪ್ರಾಪ್ತ ಬಾಲಕಿ ಮೇಲ್ನೋಟಕ್ಕೆ ಆತ್ಮಹತ್ಯೆ ಮಾಡಿರುವುದಾಗಿ ಕಂಡರೂ ಅದರ ಹಿಂದೆ ಇರುವ ಬೇರೆ ಬೇರೆ ವಿಚಾರವನ್ನು ಗಮನಿಸಿದಾಗ ಇದರಲ್ಲಿ ಏನೋ ಒಂದು ರೀತಿಯ ವಶೀಕರಣ ಇನ್ನಿತ್ಯಾದಿಗಳು ನಡೆದಿವೆ. ವಾಮಮಾರ್ಗವನ್ನು ಬಳಸುವುದು ಅಷ್ಟೊಂದು ಹಿತಕರವಲ್ಲ‌. ವಾಮಾಚಾರ ಸಮಾಜದಲ್ಲಿ ಆರೋಗ್ಯವನ್ನು ಕೆಡಿಸುವ ಕೃತ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.

 

 

 

 

ಅವರು ಬಂಟ್ವಾಳ ತಾಲೂಕು ಕನ್ಯಾನ ಗ್ರಾಮದ ಕಣಿಯೂರಿನಲ್ಲಿ ನಡೆದ 14 ವರ್ಷದ ಬಾಲಕಿ ಆತ್ಮಿಕಾಳ ಸಾವಿಗೆ ನ್ಯಾಯ ಸಿಗಬೇಕು ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಕರಾವಳಿಯಾದ್ಯಂತ ಮೇ 9ರಂದು ಪ್ರತಿಭಟನೆಗೆ ಕರೆ ನೀಡಿದ್ದು, ಬೆಳಗ್ಗೆ ಕನ್ಯಾನ ಪೇಟೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಮುಗ್ದ ಮನಸ್ಸುಗಳಿಗೆ ನೋವುಕೊಡಬಾರದು.  ನಮ್ಮ ಹಿಂದೂಗಳಲ್ಲಿ ಇರುವಂತದ್ದು ಸರಳತನ, ತಾಳ್ಮೆ‌ ಮತ್ತು  ಸಹನೆ. ಅದನ್ನು ಕೆಣಕಲು ಹೋಗಬಾರದು. ಒಂದು ವೇಳೆ ಕೆಣಕಿದರೆ ಅದು ಬೆಂಕಿಯಾಗಿ ಹೊರಬರುತ್ತದೆ. ಇದು ಹೊಸ ಘಟನೆಯಲ್ಲ. ಇದರ ಬಗ್ಗೆ ಹೋರಾಟ ಮಾಡಬೇಕಾದ ಅನಿವಾರ್ಯ ಘಟ್ಟದಲ್ಲಿ ನಾವಿದ್ದೇವೆ. ಘಟನೆಯನ್ನು ಕೂಲಂಕುಶವಾಗಿ ತನಿಖೆ ನಡೆಸಿ ಬಾಲಕಿಯ ಸಾವಿಗೆ ನ್ಯಾಯದೊರಕಿಸಿ ಕೊಡಬೇಕಾಗಿದೆ. ಈ ಪ್ರತಿಭಟನೆ ಕೇವಲ ಆರಂಭವಷ್ಟೆ. ಈ ಲವ್ ಜೀಹಾದ್ ನಂತಹ ಕೃತ್ಯವನ್ನು ತಡೆಯುವ ಕೆಲಸವಾಗಬೇಕು. ಧರ್ಮದ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ. ಇದರ ಬಗ್ಗೆ ನಾವೆಲ್ಲರೂ ಒಂದಾಗಿ ಹೋರಾಟ ಮಾಡಬೇಕಿದೆ.  ಬಡತನವನ್ನು ಬಳಸಿಕೊಳ್ಳುವುದು ಒಳ್ಳೆಯದಲ್ಲ. ನಾವೆಲ್ಲ ಜಾಗೃತರಾಗಬೇಕು ಸನಾತನ ಹಿಂದೂ ಧರ್ಮವನ್ನು ಪುನರುತ್ತಾನ ಮಾಡುವ ಕಾಯಕದಲ್ಲಿ ನಾವೆಲ್ಲ ಕೈಜೋಡಿಸಬೇಕು‌. ಯುವಶಕ್ತಿ ಹಾಗೂ ತಾಯಂದಿರು ಎದ್ದುನಿಂತಾಗ ಇಂತಹ ಕೃತ್ಯವನ್ನು ಧಮನಿಸಬಹುದು. ನ್ಯಾಯ ಮರಿಚಿಕೆಯಾದರೆ ತೀವ್ರತರಹದ ಹೋರಾಟಕ್ಕೆ ಮುಂದಡಿ ಇಡಬೇಕಾದೀತು ಎಂದರು.

ಶ್ರೀಧಾಮ ಮಾಣಿಲ ಶ್ರೀಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಮಾತನಾಡಿ  ಹಳ್ಳಿ ಹಳ್ಳಿಗಳಲ್ಲಿ ಇಂತಹ ಮುಗ್ದ ಮನಸ್ಸುಗಳನ್ನು ಮಚ್ಚಡಿಯುವಂತಹ ಮತ್ತು ಮರ್ಯಾದಿಗೆ ಹೆದರಿ ಬದುಕುತ್ತಿರುವ ಜನಸಾಮಾನ್ಯರ ಬದುಕಿನಲ್ಲಿ  ಲವ್ ಜಿಹಾದ್ ಇವತ್ತು ವ್ಯಾಪಿಸುತ್ತಿದೆ. ಅದರೊಂದಿಗೆ ಡ್ರಗ್ಸ್ ಮಾಫಿಯಾ ಜಾಲದೊಂದಿಗೆ ಈ ಎಲ್ಲಾ ವಾಮಾಚಾರದಿಂದಾಗಿ ಮುಗ್ದ ಹೆಣ್ಣುಮಕ್ಕಳನ್ನ ಸಜ್ಜನರನ್ನು ಪೀಡಿಸತಕ್ಕಂತ ಕೆಲಸ ಬೇರೆ ಬೇರೆ ರೀತಿಯಲ್ಲಿ ನಡೆಯುತ್ತಿದೆ.  ಕನ್ಯಾನದಲ್ಲಿ ನಡೆದ ಅಪ್ರಾಪ್ತ ಬಾಲಕಿಯ ಸಾವು ಇಡೀ ಹಿಂದೂ ಸಮಾಜಕ್ಕೆ ನೋವು ತಂದಿದೆ‌. ಹಿಂದೂ ಸಮಾಜದಲ್ಲಿ ನ್ಯಾಯಯುತವಾದ ಬದುಕನ್ನ ಈ ದೇಶದಲ್ಲಿ ನಡೆಸಿಕೊಳ್ಳಬೇಕು. ಇಂತಹ ಮುದ್ದ ಜೀವಗಳನ್ನು‌ ಬಲಿತೆಗೆದುಕೊಳ್ಳತಕ್ಕಂತ ಲವ್ ಜಿಹಾದಿನಿಂದ ನಾವೆಲ್ಲರೂ ಸಂಘಟಿತರಾಗುವುದು ಮಾತ್ರವಲ್ಲ ಅಂತಹ  ಮತೀಯವಾದಗಳನ್ನು ದೇಶದಲ್ಲಿ ಸೃಷ್ಠಿಸತಕ್ಕಂತಹ ಮತ್ತು ಹಿಂದೂ ಸಮಾಜಕ್ಕೆ ಆಘಾತಕಾರಿ ಪರಿಣಾಮಗಳನ್ನ ನೀಡುವ ದುಷ್ಟ ಶಕ್ತಿಗಳನ್ನ ನಿಗ್ರಹಿಸಲು ಇಡೀ ಹಿಂದೂ ಸಮಾಜ ಒಗ್ಗಟ್ಟಾಗಬೇಕು.  ಪ್ರತೀ  ಹಳ್ಳಿ ಹಳ್ಳಿಗಳಲ್ಲಿ ಹಿಂದೂ ಸಮಾಜ ಒಗ್ಗಟ್ಟಾಗಿ ಇಂತಹ ದುಷ್ಟ ಶಕ್ತಿಗಳನ್ನ ವಿರೋಧಿಸಿ ಸಮಾಜದ ಬೇರೆ ಬೇರೆ ಕಡೆಗಳಲ್ಲಿ ಆಗತಕ್ಕಂತಹ ನೀಚ ಪ್ರವೃತ್ತಿ ಯನ್ನು ಸದೆಬಡಿಯಬೇಕಾಗದ ಅವಶ್ಯಕತೆ ಬಹಳಷ್ಠಿದೆ. ಇಂತಹ ಪರಿಸ್ಥಿತಿ ಎಲ್ಲಿಯೂ ಬರಬಾರದೂ . ಮುಂದೆ  ಈ ಮಗುವಿಗೆ  ನ್ಯಾಯ ಸಿಗದಿದ್ದಲ್ಲಿ ಹಳ್ಳಿಹಳ್ಳಿಗಳಲ್ಲಿ ಉತ್ತಮವಾದ ಜಾಗೃತಿಯ ಹೆಜ್ಜೆ ಇಡಬೇಕಾದ ಅನಿವಾರ್ಯತೆ ನಮಗಿದೆ.  ಮುಂದೆ ಈ ದೇಶದ ಉದ್ದಗಲದಲ್ಲಿ ಈ ಲವ್ ಜಿಹಾದಿನ ವಿರುದ್ದ ಸೆಟೆದುನಿಲ್ಲಲು ನಾವೆಲ್ಲರೂ ಕಟಿಬದ್ದರಾಗಬೇಕು ಎಂದರು.

ಕಣಿಯೂರು ಶ್ರೀ ಚಾಮುಂಡೇಶ್ವರೀ ದೇವೀ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿಯವರು ಮಾತನಾಡಿ  ವಾಮಾಚಾರ ಎಂಬುದು ಆ ಬಾಲಕಿಯ ಮೇಲೆ ನಡೆದಿರುವುದು ನಿಜವಾಗಿದೆ. ನಮ್ಮ ಹತ್ತಿರ ಇಂತಹ ಕೃತ್ಯಗಳು ಆದಾಗ ನಾವು ಎಚ್ಚೆತ್ತುಕೊಳ್ಳ ಬೇಕಾಗಿರುವುದು ಅನಿವಾರ್ಯವಾಗಿದೆ. ಇಂತಹ ಘಟನೆಗಳು ನಡೆಯುವುದಕ್ಕಿಂತ ಮೊದಲೇ ನಾವು ಜಾಗೃತರಾಗಬೇಕಿದೆ. ಅತಿಯಾಗಿ ನಯವಿನಯದಲ್ಲಿ ಮಾತನಾಡುವವನಲ್ಲಿ ದೂರ್ತ ಲಕ್ಷಣವಿರುತ್ತದೆ. ಭಾರತ ಭೂಮಿಯಲ್ಲಿ ಹುಟ್ಟಿದ  ವಿಕೃತವಾದ ವಿಷಬೀಜಗಳು ನಾಶವಾಗಬೇಕು. ಹಿಂದೂ ಸಂಘಟನೆಯ ಇಂತಹ ಕಾರ್ಯ ಶ್ಲಾಗನೀಯ. ಇಂತಹ ವಿಚಾರಗಳು ಬಂದಾಗ ನಾವು ಸಂಘಟಿತರಾಗಿ ಹೋರಾಟ ಮಾಡಬೇಕಾಗಿರುವುದು ಅನಿವಾರ್ಯವಾಗಿದೆ.

ವಿಶ್ವ ಹಿಂದೂ ಪರಿಷತ್ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಮಾತನಾಡಿ ಯಾವ ತಂದೆ ತಾಯಿಗೂ ಇಂತಹ ದುರ್ದೈವ ಬರಬಾರದು.  ಪ್ರೀತಿಯೆಂಬ ನಾಟಕ, ವಶೀಕರಣಕ್ಕೋಸ್ಕರ ವಾಮಾಚಾರ, ಪ್ರತಿದಿನ ಮನೆಗೆ ಬಂದು ಪ್ರೀತಿಸುವಂತೆ ಒತ್ತಡ ಈ ಷಡ್ಯಂತರಕ್ಕೆ ಓರ್ವ ಹೆಣ್ಣುಮಗಳು ಬಲಿಯಾದಳು. ನಾವು ಕಳೆದ ಹಲವಾರು ವರುಷಗಳಿಂದ ಹೇಳುತ್ತಿರುವ ಲವ್ ಜಿಹಾದ್ ಎಂದರೆ‌ ಇದೇ. ಈ ದೇಶವನ್ನು ಮುಸ್ಲೀಮರು ಇಸ್ಲಾಮಿಕರಣ ಮಾಡಬೇಕು. ಈ ದೇಶವನ್ನು ಇಸ್ಲಾಮಿನ ಮುಖಾಂತರ ಮತಾಂತರ ಮಾಡಬೇಕೆಂದಿರುವ ಕಳೆದ ಹಲವಾರು ವರುಷಗಳ ಷಡ್ಯಂತ್ರವೇ ಲವ್ ಜಿಹಾದ್, ಅದೇ ಲ್ಯಾಂಡ್ ಜಿಹಾದ್,‌ ಅದೇ ಭಯೋತ್ಪಾದನೆ.  ಇದೀಗ ಲವ್ ಜಿಹಾದ್ ಗೆ ಓರ್ವ ಹಿಂದೂ ಹೆಣ್ಣುಮಗಳು ಬಲಿಯಾಗಿದ್ದಾಳೆ. ನ್ಯಾಯಕ್ಕಾಗಿ ಇದೀಗ ಹಿಂದೂ ಸಂಘಟನೆಗಳು ಪ್ರತಿಭಟನೆಗೆ ಹೆಜ್ಜೆ ಇಟ್ಟಿದೆ. ನಮಗೆ ಮುಸ್ಲೀಮರ ಇಂತಹ‌ ವರ್ತನೆ ಸಂಶಯಕ್ಕೆ ಕಾರಣವಾಗುತ್ತಿದೆ.  ಹದಿನಾಲ್ಕು ವರುಷದ ಹೆಣ್ಣುಮಗಳೊಬ್ಬಳು ಆತ್ಮಹತ್ಯೆ ಮಾಡಿಕೊಂಡಾಗ ಆಕೆಗೆ ಆದ ಅನ್ಯಾಯಕ್ಕೆ ನೀವು ಹೋರಾಟಮಾಡಬೇಕಿತ್ತು. ಆದರೆ ನೀವ್ಯಾರು ಪ್ರತಿಭಟನೆಗೆ ಬಂದಿಲ್ಲ ಅದಕ್ಕಾಗಿಯೇ ನಾವಿಲ್ಲಿ ನಿಮ್ಮ ಬಗ್ಗೆ ಮಾತನಾಡೋದು.  ನಮ್ಮ ಸಮಾಜಕ್ಕೆ  ನೀವುಗಳು‌ದ್ರೋಹ ಬಗೆಯುತ್ತಾ ಇದ್ದೀರ. ಒಬ್ಬನೇ ಒಬ್ಬ ಮುಸ್ಲೀಂ ಆ ಬಾಲಕಿಗೆ ಅನ್ಯಾಯವಾಗಿದೆ. ಆ ಆರೋಪಿಗೆ ಶಿಕ್ಷೆಯಾಗಬೇಕು  ಎಂದು ಹೇಳಿಕೆ ಕೊಡಿ ನೋಡೋಣ. ಯಾರಾದರೂ ಈ ಬಗ್ಗೆ ಮಾತನಾಡಿದ್ದಾರ. ಮುಸ್ಲೀಂ ಸಮುದಾಯ‌ ಹಾಗೂ ಧರ್ಮಗುರುಗಳು ಇಂತಹ ಕೃತ್ಯಕ್ಕೆ ಕುಮ್ಮಕ್ಕು ಕೊಡ್ತಾ ಇದ್ದೀರಿ ಎನ್ನುವ ಭಲವಾದ ಸಂಶಯ ವ್ಯಕ್ತವಾಗುತ್ತಿದೆ. ದಲಿತ ಸಂಘಟನೆಗಳ ಮೌನ ನಮಗೆ ಆಶ್ಚರ್ಯವಾಗುತ್ತಿದೆ. ಕನ್ಯಾನದಲ್ಲಿ ಪರಿಷಿಷ್ಠ ಪಂಗಡಕ್ಕೆ ಸೇರಿರುವ ಯುವತಿಯ ಸಾವಾದಾಗ ನೀವೆಲ್ಲ ಯಾಕೆ ಧ್ವನಿ ಎತ್ತುತ್ತಿಲ್ಲ.

ನಿಮ್ಮ ಇಬ್ಬಗೆ ನೀತಿಯಿಂದಾಗಿ ನಿಮ್ಮನ್ನು ಮುಸಲ್ಮಾನರು ಉಪಯೋಗಿಸುತ್ತಿದ್ದಾರೆ. ನಾವು ದಲಿತ ವಿರೋದಿಗಳಲ್ಲ.ನಿಮ್ಮ ಮೇಲೆ ಗೌರವ ವಿಶ್ವಾಸ ಇದೆ. ನಮಗೆ ಯಾವುದೇ ಭೇದ ಭಾವವಿಲ್ಲ.‌ ಹೋರಾಟಕ್ಕೆ ಇಳಿಯಿರಿ ಆ ಬಾಲಕಿಯ ಸಾವಿಗೆ ನ್ಯಾಯದೊರಕಿಸಿಕೊಡಿ. ಇನ್ನೊಂದೆಡೆ ಈ ಅಪ್ರಾಪ್ತ ಬಾಲಕಿಯ ಸಾವಿನ ವಿಚಾರದಲ್ಲಿ  ಕಾಂಗ್ರೆಸ್ ಮೌನವಹಿಸಿದೆ. ಈ ಘಟನೆಯ ಬಗ್ಗೆ ಯಾವುದೆ ಮಾತನಾಡುತ್ತಿಲ್ಲ. ಇದು ಮತ್ತಷ್ಟು ಸಂಶಯಕ್ಕೆ ಎಡೆಮಾಡಿಕೊಡುತ್ತಿದೆ‌. ಎಲ್ಲಾ ಜಮಾತಿನ ಮುಖ್ಯಸ್ಥರಿಗೆ  ಹೇಳಲು ಬಯಸ್ತೇನೆ‌ ನಿಮ್ಮ ಯುವಕರಿಗೆ ಬುದ್ದಿವಾದ ಹೇಳಿ. ನಮ್ಮವರ ತಂಟೆಗೆ ಬರಲು ಬಿಡಬೇಡಿ. ನಿಮ್ಮ ಹೆಣ್ಣುಮಕ್ಕಳಿಗೆ ತೊಂದರೆಯಾಗುವುದಕ್ಕೆ ಹಿಜಾಬ್ ಬೇಕು. ಆದರೆ ನಮ್ಮ ಹೆಣ್ಣು ಮಕ್ಕಳಿಗೆ ತೊಂದರೆ ಕೊಡುವುದು ಎಷ್ಟು ಸರಿ. ನಿಮ್ಮ ಯುವಕರನ್ನು ನಿಮ್ಮ ಹದ್ದುಬಸ್ತಿನಲ್ಲಿಡುವ ಕೆಲಸವನ್ನು ನೀವುಗಳು ಮಾಡಿ ಇಲ್ಲವಾದಲ್ಲಿ ನಮ್ಮ ಯುವ ಪಡೆ ಅದಕ್ಕೆ ತಕ್ಕಶಾಸ್ತಿ ಮಾಡಲಿದೆ. ನಾವೆಲ್ಲರೂ ಒಂದಾಗಿ ಆ ಮನೆಗೆ ಸಹಕಾರ ನೀಡೋಣ. ಆ ಕುಟುಂಬಕ್ಕೆ ನಾವು ಆಸರೆಯಾಗೋಣ. ಮುಂದಿನ ದಿನಗಳಲ್ಲಿ ಲವ್ ಜಿಹಾದ್ ನ  ಹೋರಾಟವನ್ನು ಇನ್ನಷ್ಟು ಹೆಚ್ಚುಮಾಡೋಣ. ಮುಂದೆ ನಮ್ಮ ಈ ಗ್ರಾಮದಲ್ಲಿ ಈ ಲವ್ ಜಿಹಾದ್ ಗೆ ಯಾವುದೇ ಹೆಣ್ಣು ಮಕ್ಕಳು ಬಲಿಯಾಗ ಬಾರದು ಎಂದು ಸಂಕಲ್ಪ ಮಾಡೋಣ. ಈ ನಮ್ಮ ಕೂಗು ಸರಕಾರಕ್ಕೆ ಕೇಳಬೇಕು. ಲವ್ ಜಿಹಾದ್ ಮಾಡುವ ಯುಕರಿಗೆ ಇದೊಂದು ಕರೆಘಂಟೆಯಾಗಬೇಕು ಎಂದರು. ಈ‌ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಕೃಷ್ಣಪ್ಪ ಕಲ್ಲಡ್ಕ ವಿಶ್ವ ಹಿಂದೂ ರಿಷತ್ ವಿಟ್ಲ ಅಧ್ಯಕ್ಷ ಪದ್ಮನಾಭ ಕಟ್ಟೆ, ವಿಟ್ಲ ಬಜರಂಗದಳದ ಸಂಚಾಲಕ ಚಂದ್ರಹಾಸ ಕನ್ಯಾನ, ವಿಶ್ವ ಹಿಂದೂ ಪರಿಷತ್ ಮುಖಂಡ ಗೋವರ್ಧನ್, ವಿಶ್ವಹಿಂದೂ ಪರಿಷತ್ ನ ಕನ್ಯಾನ ಘಟಕದ ಅಧ್ಯಕ್ಷ ಲೊಕೇಶ್ ಗೌಡ ಕನ್ಯಾನ, ಭಜರಂಗದಳ ಸಂಚಾಲಕ ಕೃಷ್ಣಪ್ಪ ಗೌಡ ಪಣೆಯಡ್ಕ,  ವಿಶ್ವಹಿಂದೂ ಪರಿಷತ್ ನ ಕನ್ಯಾನ ಘಟಕದ ಕಾರ್ಯದರ್ಶಿ ಮನೋಜ್ ಕುಮಾರ್ ಬನಾರಿ, ಜಗದೀಶ್ ಸಿ.ಹೆಚ್, ಮುಖಂಡರಾದ ದಯಾನಂದ ಶೆಟ್ಟಿ ಉಜಿರೆಮಾರ್, ಲೋಹಿತ್ ಪನೋಲಿಬೈಲ್, ಪುನೀತ್ ಮಾಡ್ತಾರ್  ಸೇರಿದಂತೆ ಹಲವು ಸಂಘಟನಾ ಪ್ರಮುಖರು, ಸಂಘಟನಾ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here