ಒಡದಕರೆ ಶ್ರೀ ಮಹಾಮಾಯಿ ಮಾರಿಯಮ್ಮ ಸಾನಿಧ್ಯದ ಶಾಶ್ವತ ಚಪ್ಪರದ ಮೇಲ್ಛಾವಣಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ 50ಸಾವಿರದ ಚೆಕ್ ಹಸ್ತಾಂತರ

0

 

ಕಾಣಿಯೂರು: ಚಾರ್ವಾಕ ಒಡದಕರೆ ಶ್ರೀ ಮಹಾಮಾಯಿ ಮಾರಿಯಮ್ಮ ಮತ್ತು ಪರಿವಾರ ದೈವಗಳ ಸಾನಿಧ್ಯ, ದೈವಸ್ಥಾನದ ಸುತ್ತಲೂ ಸುಮಾರು 3,80,000 ರೂ ವೆಚ್ಚದಲ್ಲಿ, ನಿರ್ಮಾಣವಾದ ಶಾಶ್ವತ ಚಪ್ಪರದ ಮೇಲ್ಛಾವಣಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸುಮಾರು 50,000 ಸಾವಿರದ ಚೆಕ್ ನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪ ನಾವೂರು ಅವರು ದೈವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಉಮೇಶ್ ಕೋಂಡಿಂಬಾಳ, ಉಪಾಧ್ಯಕ್ಷರಾದ ಕುಶಾಲಪ್ಪ ಒಡದಕರೆ ಹಾಗೂ ಸದಸ್ಯರಾದ ಬಾಬು.ಬಿ, ರಮೇಶ್.ಬಿ, ಹುಕ್ರಪ್ಪ, ಕೀಟ್ಟ.ಕೆ ಅವರ ಸಮ್ಮುಖದಲ್ಲಿ ಮಹಾಮಾಯಿ ಮಾರಿಯಮ್ಮ ಮತ್ತು ಪರಿವಾರ ದೈವಗಳ ಸಾನಿಧ್ಯದಲ್ಲಿ ಹಸ್ತಾಂತರಿಸಿದರು. ಯೋಜನೆಯ ನಾಣಿಲ ಒಕ್ಕೂಟದ ಅಧ್ಯಕ್ಷ ಕೇಶವ ಖಂಡಿಗ ಉಪಸ್ಥಿತರಿದ್ದರು. ಸೇವಾ ಪ್ರತಿನಿಧಿ ಲೀಲಾವತಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here