ಪುಣಚ; ಕೊಲ್ಲಪದವು ತರವಾಡು ದೈವಗಳ ಪ್ರತಿಷ್ಟಾ ಮಹೋತ್ಸವ, ನೇಮೋತ್ಸವ

0

 

ನಿಡ್ಪಳ್ಳಿ; ಪುಣಚ ಗ್ರಾಮದ ಕೊಲ್ಲಪದವು ತರವಾಡಿನಲ್ಲಿ ನೂತನವಾಗಿ ನಿರ್ಮಿಸಿರುವ ದೈವಸ್ಥಾನದಲ್ಲಿ ಶ್ರೀದೈವಗಳ ಪ್ರತಿಷ್ಟಾ ಮಹೋತ್ಸವ ಮತ್ತು ದೈವಗಳ ನೇಮೋತ್ಸವ ಮೇ.7 ರಿಂದ 9 ರವರೆಗೆ ನಡೆಯಿತು.   ಮೇ.7 ರಂದು ಸಂಜೆ ವಾಸ್ತು ಹೋಮ, ಸ್ಥಳಶುದ್ದಿ ನಡೆಯಿತು. ಮೇ.8 ರಂದು ಬೆಳಿಗ್ಗೆ ಗಣಹೋಮ ನಂತರ ಶ್ರೀದೈವಗಳ ಪ್ರತಿಷ್ಠೆ ನಂತರ ಪ್ರಸಾದ ವಿತರಣೆ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಸಂಜೆ ಗುಳಿಗ ದೈವದ ನೇಮ, ರಾತ್ರಿ ಕೊರಗಜ್ಜ ದೈವದ ಕೋಲ ನಂತರ ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನಡೆದು ಕುಪ್ಪೆ ಪಂಜುರ್ಲಿ ಮತ್ತು ಕಲ್ಲುರ್ಟಿ ದೈವದ ನೇಮೋತ್ಸವ ನಂತರ ಪ್ರಸಾದ ವಿತರಣೆ ನಡೆಯಿತು. ಮೇ.9 ರಂದು ಬೆಳಿಗ್ಗೆ ಧರ್ಮದೈವ ಅಣ್ಣಪ್ಪ ಪಂಜುರ್ಲಿ ದೈವದ ನೇಮ ಪ್ರಸಾದ ವಿತರಣೆ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.

 

 


ಪುತ್ತೂರು ಶಾಸಕ ಸಂಜೀವ ಮಠಂದೂರು, ತಾಲೂಕು ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಪುಣಚ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಕೃಷ್ಣ, ಸದಸ್ಯ ಅಶೋಕ, ತಾಲೂಕು ಪಂಚಾಯತ್ ಮಾಜಿ ಸದಸ್ಯ ಹರಿಕೃಷ್ಣ ಶೆಟ್ಟಿ ಮೂಡಂಬೈಲ್ ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಮೊಕ್ತೇಸರ ಕೊರಗ ಕೊಲ್ಲಪದವು ಮತ್ತು ಕುಟುಂಬಸ್ಥರು ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here