ಮದ್ಯದ ಅಮಲಿನಲ್ಲಿ ಅಣ್ಣನಿಂದಲೇ ತಮ್ಮನ ಕೊಲೆ

0

  • ಕನ್ಯಾನದ ಶೀರಂಕಲ್ಲುವಿನಲ್ಲಿ ನಡೆದ ಘಟನೆ
  • ಆರೋಪಿ ಅಣ್ಣ ಪೊಲೀಸ್ ವಶಕ್ಕೆ

ವಿಟ್ಲ :ಸಹೋದರರ ನಡುವೆ ಗಲಾಟೆ ನಡೆದು ಅಣ್ಣನೇ ತಮ್ಮನನ್ನು ಮರದ ದೊಣ್ಣೆಯಿಂದ ಹೊಡೆದು ಕೊಲೆಗೈದ ಘಟನೆ ಕನ್ಯಾನ ಗ್ರಾಮದ ನಂದರಬೆಟ್ಟು ಶೀರಂಕಲ್ಲು ಎಂಬಲ್ಲಿ ಮೇ.10ರಂದು ರಾತ್ರಿ ನಡೆದಿದೆ.

ಕನ್ಯಾನ ಗ್ರಾಮದ ನಂದರಬೆಟ್ಟು ಶೀರಂಕಲ್ಲು ನಿವಾಸಿ ಕೃಷ್ಣ ನಾಯ್ಕ್ ರವರ ಪುತ್ರ ಬಾಳಪ್ಪ ನಾಯ್ಕ್ (35 ವ.) ಕೊಲೆಗೀಡಾದವರಾಗಿದ್ದಾರೆ. ಇವರ ಅಣ್ಣ ಐತ್ತಪ್ಪ ನಾಯ್ಕ್ ಪ್ರಕರಣದ ಆರೋಪಿಯಾಗಿದ್ದಾರೆ. ಅವಿವಾಹಿತನಾಗಿರುವ ಬಾಳಪ್ಪ ನಾಯ್ಕ್ ರವರು ಕಳೆದ ಕೆಲ ವರುಷಗಳಿಂದ ಅಡ್ಯನಡ್ಕದಲ್ಲಿ ತನ್ನ ತಾಯಿಯೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಮೇ.10ರಂದು ಶೀರಂಕಲ್ಲುವಿನ ಇವರ ಮನೆ ಪಕ್ಕದ ಮನೆಯಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಬಾಳಪ್ಪ ನಾಯ್ಕ್ ರವರು ಬಂದಿದ್ದ ವೇಳೆ ಅಣ್ಣ ಐತ್ತಪ್ಪ ನಾಯ್ಕ್ ರ ಮಧ್ಯೆ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಮಾತಿಗೆ ಮಾತು ಬೆಳೆದಿತ್ತು. ಬಳಿಕ ಅದು ತಾರಕಕ್ಕೇರಿದಾಗ ಐತಪ್ಪ ನಾಯ್ಕ್ ರವರು ತಮ್ಮ ಬಾಳಪ್ಪ ನಾಯ್ಕ್ ರವರಿಗೆ ಮರದ ದೊಣ್ಣೆಯಿಂದ ಹಲ್ಲೆ ನಡೆಸಿದ್ದರೆನ್ನಲಾಗಿದೆ. ತಲೆ ಭಾಗಕ್ಕೆ ಗಂಭೀರ ಗಾಯಗೊಂಡ ಬಾಳಪ್ಪ ನಾಯ್ಕ್ ರವರು ಸ್ಥಳದಲ್ಲೇ ಮೃತಪಟ್ಟರೆಂದು ಪೊಲೀಸರು ತಿಳಿಸಿದ್ದಾರೆ. ಐತ್ತಪ್ಪ ನಾಯ್ಕ್ ರವರು ವಿವಾಹಿತರಾಗಿದ್ದು ಶೀರಂಕಲ್ಲುವಿನ ಮನೆಯಲ್ಲಿ ಅವರೊಬ್ಬರೇ ವಾಸಿಸುತ್ತಿದ್ದರು ಎನ್ನಲಾಗಿದೆ. ಕುಡಿತದ ಮತ್ತಿನಲ್ಲಿ ಈ ಗಲಾಟೆ ನಡೆದಿದೆ ಎಂದು ತಿಳಿದುಬಂದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಘಟನೆಗೆ ಸಂಬಂಽಸಿದಂತೆ ಆರೋಪಿ ಐತಪ್ಪ ನಾಯ್ಕ್ ರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಘಟನಾಸ್ಥಳಕ್ಕೆ ವಿಟ್ಲ ಠಾಣಾ ಇನ್ಸ್ ಪೆಕ್ಟರ್ ಹೆಚ್.ಈ. ನಾಗರಾಜ್ ರವರ ನೇತೃತ್ವದ ಪೊಲೀಸರ ತಂಡ ತೆರಳಿ ಮಾಹಿತಿ ಸಂಗ್ರಹಿಸಿದೆ. ಮೃತರ ಸಂಬಂಽಕರಾದ ರವಿ ಎಂಬವರು ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here