ಪಳ್ಳತ್ತಾರು ಮದ್ರಸ ಪ್ರಾರಂಭೋತ್ಸವ ‘ಫತ್ಹೇ ಮುಬಾರಕ್’

0

 

 

ಕಾಣಿಯೂರು:ಬೆಳಂದೂರು ಗ್ರಾಮದ ಪಳ್ಳತ್ತಾರು ಮುಹಿಯುದ್ದೀನ್ ಜುಮಾ ಮಸೀದಿ ಇದರ ಅಡಿಯಲ್ಲಿ ಕಾರ್ಯಾಚರಿಸುತ್ತಿರುವ ತಖ್ವಿಯತುಲ್ ಇಸ್ಲಾಂ ಸೆಕೆಂಡರಿ ಮದ್ರಸ ಇದರ ಈ ವರ್ಷದ ಶೈಕ್ಷಣಿಕ ಪ್ರಾರಂಭೋತ್ಸವ ಫತ್ಹೇ ಮುಬಾರಕ್ ಕಾರ್ಯಕ್ರಮ ಮೇ 11 ರಂದು ನಡೆಯಿತು.

ಕರ್ನಾಟಕ ಮುಸ್ಲಿಂ ಜಮಾಅತ್,ಎಸ್ ಎಸ್ ಎಫ್,ಎಸ್ ವೈ ಎಸ್,ಕೆ ಸಿ ಎಫ್ ನ ವತಿಯಿಂದ ಮದ್ರಸ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಾಠ ಪುಸ್ತಕಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಜಮಾಅತ್ ಅಧ್ಯಕ್ಷ ಅಬೂಬಕರ್ ಹಾಜಿ, ಕಾರ್ಯದರ್ಶಿ ನವಾಝ್ ಸಖಾಫಿ, ಜಮಾಅತ್ ಖತೀಬ್ ಮುಶ್ತಾಕ್ ಕಾಮಿಲ್ ಸಖಾಫಿ,ಅಧ್ಯಾಪಕರಾದ ಕಲಾಂ ಝುಹ್ರಿ,ಜಲೀಲ್ ಮುಈನಿ,ಉಪ್ಪಂಞಿ ಹಾಜಿ,ಇಬ್ರಾಹಿಂ ಹಾಜಿ,ಉಮ್ಮರ್ ಕೂಂಕ್ಯ,ಯಾಕೂಬ್ ಬನಾರಿ,ಯೂಸುಫ್ ಗುಂಡಿನಾರು,ನಝೀರ್ ಮುಸ್ಲಿಯಾರ್,ಹನೀಫ್ ಹಿಮಮಿ,ಅಬ್ಬಾಸ್ ಏರಿಮಾರ್,ಶಂಸುದ್ದೀನ್ ಇಂಜಿನಿಯರ್ ಸೇರಿದಂತೆ ಜಮಾಅತಿನ ಪದಾಧಿಕಾರಿಗಳು ಪೋಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು..

LEAVE A REPLY

Please enter your comment!
Please enter your name here