ಪುತ್ತೂರು: ಹಿರೇಬಂಡಾಡಿ ಗ್ರಾಮದ ಮಠಂದೂರು ಎಂಬಲ್ಲಿ ಮಠಂದೂರು ಒಕ್ಕಲಿಗ ಸ್ವಸಹಾಯ ಸಂಘದ ರಚನೆ ಮಾಡಲಾಯಿತು. ಈ ಸಂದರ್ಭದಲ್ಲಿ ಪುತ್ತೂರಿನ ಶಾಸಕರಾದ ಸಂಜೀವ ಮಠಂದೂರು ಹಾಗೂ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಪುತ್ತೂರು ಇದರ ಸ್ಥಾಪಕ ಅಧ್ಯಕ್ಷರಾದ ಎ.ವಿ ನಾರಾಯಣ ಗೌಡ, ಸಲಹಾ ಸಮಿತಿ ಸದಸ್ಯರಾದ ವೆಂಕಪ್ಪ ಗೌಡ, ಮೇಲ್ವಿಚಾರಕಿ ಸುಮಲತಾ, ಪ್ರೇರಕರಾದ ತಾರಾನಾಥ್ ಉಪಸ್ಥಿತರಿದ್ದರು. ತಂಡದ ಪ್ರಬಂಧಕರಾಗಿ ಬಾಲಕೃಷ್ಣ ಗೌಡ, ಸಂಯೋಜಕರಾಗಿ ಹರಿಣಾಕ್ಷಿ ಆಯ್ಕೆಯಾದರು. ಸಂಜೀವ ಮಠಂದೂರು, ಹೇಮ ಲತಾ, ಮೋನಪ್ಪ ಗೌಡ, ಗಣೇಶ ಗೌಡ, ಲತಾ, ವೇದಾವತಿ ಈ ತಂಡದ ಇತರ ಸದಸ್ಯರಾಗಿ ನೋಂದಣೆ ಗೊಂಡರು.