ಪುತ್ತೂರು: ಚೆನ್ನಾರ್ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ 2 ವರ್ಷ ಮುದರ್ರಿಸ್ ಆಗಿ ಸೇವೆ ಸಲ್ಲಿಸಿದ ಹಾಫಿಳ್ ನಝೀರ್ ಸಖಾಫಿಯವರಿಗೆ ಜಮಾಅತ್ ಕಮಿಟಿ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಜಮಾಅತ್ ಕಮಿಟಿ ಅಧ್ಯಕ್ಷ ಶಾಫಿ ಚೆನ್ನಾರ್, ಸದಸ್ಯರಾದ ಶರೀಫ್ ಕುಂಡಡ್ಕ, ಜಮಾಲುದ್ದೀನ್ ಚೆನ್ನಾರ್, ಅಬ್ದುಲ್ ರಹಿಮಾನ್ ಪಾಲ್ತಾಡ್, ಇಸ್ಮಾಯಿಲ್ ಕಾನಾವು, ಹನೀಫ್ ಇಂದ್ರಾಜೆ ಕುಂಡಡ್ಕ ಮೊದಲಾದವರು ಸನ್ಮಾನ ನೆರವೇರಿಸಿದರು.