ನಿಡ್ಪಳ್ಳಿ; ಪಾಣಾಜೆ ಗ್ರಾಮದ ನಡುಕಟ್ಟ ನಿವಾಸಿ ಗಿರೀಶ್ ಭಟ್ (45ವ.) ಎಂಬವರು ಹೃದಯಾಘಾತದಿಂದ ಮೃತಪಟ್ಟ ಘಟನೆ ಮೇ.12 ರಂದು ಬೆಳಕಿಗೆ ಬಂದಿದೆ.
ಅವಿವಾಹಿತರಾಗಿದ್ದ ಗಿರೀಶ್ರವರು ಕೃಷಿಕರಾಗಿದ್ದು ಮನೆಯಲ್ಲಿ ಒಬ್ಬರೇ ವಾಸವಿದ್ದರು. ಗಿರೀಶ್ ಅವರಿಗೆ ಸಂಬಂಧಿಕರು ಫೋನ್ ಕಾಲ್ ಮಾಡಿದಾಗ ಅವರು ಪೋನ್ ರಿಸೀವ್ ಮಾಡದಿದ್ದರಿಂದ ಅವರ ಮನೆಗೆ ಬಂದು ನೋಡಿದಾಗ ಹಾಸಿಗೆಯಲ್ಲಿ ಮಲಗಿದ ಸ್ಥಿತಿಯಲ್ಲಿ ಇದ್ದದ್ದು ಕಂಡು ಬಂತು. ಅವರು ಮೇ.11 ರಂದು ರಾತ್ರಿ ಮಲಗಿದವರಿಗೆ ಹೃದಯಾಘಾತ ಸಂಭವಿಸಿರಬಹುದೆಂದು ಶಂಕಿಸಲಾಗಿದೆ. ಈ ಬಗ್ಗೆ ಸಂಪ್ಯ ಠಾಣೆಗೆ ಮಾಹಿತಿ ನೀಡಿದ್ದು ಎಸ್.ಐ ಮತ್ತು ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಹಾಕಿದ್ದ ಬಾಗಿಲು ತೆಗೆಯಲಾಯಿತು. ಮೃತ ದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ತಿಳಿದು ಬಂದಿದೆ.