ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ

0

 


ಉಪ್ಪಿನಂಗಡಿ: ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ವಿಜೃಂಭಣೆಯಿಂದ ನಡೆಯಿತು. ಈ ಸಂದರ್ಭದಲ್ಲಿ ದೇವಾಲಯದ ಆಡಳಿತ ಮೊಕ್ತೇಸರರಾದ ಬಿ. ಗಣೇಶ್ ಶೆಣೈ, ಮೊಕ್ತೇಸರರಾದ ಡಾ. ರತ್ನಾಕರ ಶೆಣೈ, ಯು. ನಾಗರಾಜ ಭಟ್, ಕೆ. ಅನಂತರಾಯ ಕಿಣಿ, ಪಿ. ದೇವಿದಾಸ ಭಟ್ ಹಾಗೂ ಸೇವಾಕರ್ತರಾದ ಉಜಿರೆ ಪ್ರಭಾತ್ ಭಟ್ ಹಾಗೂ ಉಪ್ಪಿನಂಗಡಿ ಕೆ ಕೃಷ್ಣಭಟ್ ಪ್ರಮುಖರಾದ ಕೆ ಸುರೇಶ ಕಿಣಿ, ಸಂತೋಷ ಕಾಮತ್, ಪದ್ಮನಾಭ ಕಾಮತ್, ಹರೀಶ ಕಿಣಿ, ವಿದ್ಯಾಧರ ಮಲ್ಯ, ಕೆ. ನರಸಿಂಹ ಪಡಿಯಾರ್, ವೈ. ಅನಂತ ಶೆಣೈ, ಹರೀಶ ಪೈ ಮತ್ತಿತರರು ಉಪಸ್ಥಿತರಿದ್ದರು.

 


ಶ್ರೀ ದೇವಾಲಯದ ಅರ್ಚಕರಾದ ರವೀಂದ್ರ ಭಟ್, ಸಂದೀಪ್ ಭಟ್, ಪಿ. ನರಸಿಂಹ ಭಟ್ ಹಾಗೂ ಪಿ. ಸುಬ್ರಹ್ಮಣ್ಯ ಭಟ್ ಪೂಜಾ ವಿಧಿ-ವಿಧಾನವನ್ನು ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here