ಬಡಗನ್ನೂರುಃ ಸಂಘಟನೆಗಳು ಬಡವರಿಗೆ ಅಸರೆಯಾಗಬೇಕು ಎಂದು ಕೋಡಿಂಬಾಡಿ ರೈ ಎಸ್ಟೇಟ್ ಅಶೋಕ್ ರೈ ಕೆ.ಯಸ್ ಹೇಳಿದರು ಅವರು ಹಿರಿಯ ವಿದ್ಯಾರ್ಥಿ ಸಂಘ ಕೊಯಿಲ ಬಡಗನ್ನೂರು ಇದರ ವತಿಯಿಂದ ಫ್ರೆಂಡ್ಸ್ ಟ್ರೋಫಿ ವಾಲಿಬಾಲ್ ಪಂದ್ಯಾಟದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ವಿಜೇತರಿಗೆ ಬಹುಮಾನ ವಿತರಣೆ ಮಾಡಿ ಮಾತನಾಡಿದರು. ಪಂದ್ಯಾಟ ಮೆ.೮ ರಂದು ಕೊಲ ಬಡಗನ್ನೂರು ಸ.ಹಿ.ಪ್ರಾ.ಶಾಲಾ ಮೈದಾನದಲ್ಲಿ ನಡೆಯಿತು.
ವೇದಿಕೆಯಲ್ಲಿ ಬಡಗನ್ನೂರು ಗ್ರಾ.ಪಂ ಮಾಜಿ ಸದಸ್ಯ ಗುರುಪ್ರಸಾದ ರೈ ಕುದ್ಕಾಡಿ, ಸುಳ್ಯಪದವು ಶೀತಲ ಬಾರ್ & ರೆಸ್ಟೋರೆಂಟ್ ಮಾಲ್ಹಕ ಸುರೇಶ್ ಕುಮಾರ್, ಮಂಗಳೂರು ಎಮ್ ಎಸ್ ಅರ್ಥ್ ಮೋಟರ್ಸ್ ಮಾಲಕ ಸಿದ್ಧಿಕ್ ಪಾಲಡ್ಕ, ಯುವ ಉದ್ಯಮಿ ರಾಕೇಶ್ ರೈ ಕುದ್ಕಾಡಿ, ಕೊಯಿಲ ಬಡಗನ್ನೂರು ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಕಾಶ್ ರೈ ಕೊಲ ಉಪಸ್ಥಿತರಿದ್ದರು. ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಕ್ರೀಡಾ ಪಟುಗಳು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.
ಕೋಡಿಂಬಾಡಿ ರೈ ಎಸ್ಟೇಟ್ ಅಶೋಕ್ ರೈ ಕೆ.ಯಸ್ರವರಿಗೆ ಶಾಲು, ಫಲಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಫ್ರೆಂಡ್ಸ್ ಟ್ರೋಫಿ ವಾಲಿಬಾಲ್ ಪಂದ್ಯಾವಳಿಯ ಪ್ರಥಮ ಬಹುಮಾನವನ್ನು ಪಟ್ಟೆ ವಾಲಬಾಯ್ ಫ್ರೆಂಡ್ಸ್ ತಂಡ, ದ್ವೀತಿಯ ಬಹುಮಾನವನ್ನು ಹೀರಾ ರೋಡ್ ಲೈನ್ ತಂಡ ಪಡೆದುಕೊಂಡಿತು. ತೃತೀಯ ಮತ್ತು ಚತುರ್ಥ ಸ್ಥಾನವನ್ನು ಮೈಂದನಡ್ಕ ಮತ್ತು ಪಡುಮಲೆ ತಂಡಗಳು ಪಡೆದುಕೊಂಡವು.