ಸಿನಿಮಾ, ನಾಟಕ ಅಭಿನಯ ಕಲಿಯಬೇಕೆ?

0

  • ಕುಂಬ್ರದಲ್ಲಿ ಆರಂಭವಾಗುತ್ತಿದೆ ತರಬೇತಿ ಶಿಬಿರ
  • ಜೂ.1ರಿಂದ ತರಬೇತಿ ಆರಂಭ

ಪುತ್ತೂರು: ಸಿನಿಮಾ, ನಾಟಕ ಅಭಿನಯ ಕಲಿಯುವವರಿಗೆ ಸುವರ್ಣಾವಕಾಶ, ರಾಜ್ಯದ ಪ್ರಸಿದ್ಧ ಸಿನಿಮಾ, ನಾಟಕ ಕಲಾವಿದರಿಂದ ಮತ್ತು ತಂತ್ರಜ್ಞರಿಂದ ತರಬೇತಿ ನಡೆಯಲಿದೆ. ಮಂದಾರ ಕ್ರಿಯೇಷನ್ಸ್ ಸಾದರಪಡಿಸುವ ನಾಟಕ, ಸಿನಿಮಾ ಅಭಿನಯ ತರಬೇತಿ ಶಿಬಿರ ಜೂ.೦೧ ರಿಂದ ಕುಂಬ್ರದಲ್ಲಿ ಆರಂಭಗೊಳ್ಳುತ್ತಿದೆ. ಯಾವುದೇ ವಯೋಮಾನದವರು ಕೂಡ ಶಿಬಿರದಲ್ಲಿ ಭಾಗವಹಿಸಿ ತರಬೇತಿ ಪಡೆದುಕೊಳ್ಳಬಹುದು ಇದಲ್ಲದೆ ತರಬೇತಿ ಪಡೆದವರಿಗೆ ಮುಂದೆ ಸಿನಿಮಾ, ನಾಟಕಗಳಲ್ಲಿ ಅಭಿನಯಿಸಲು ಅವಕಾಶ ನೀಡಲಾಗುತ್ತದೆ. ಪ್ರತಿದಿನ ಸಂಜೆ ೫.೩೦ ರಿಂದ ೭.೩೦ ರವರೇಗೆ ತರಬೇತಿ ನಡೆಯಲಿದ್ದು ಆಸಕ್ತರು ಈ ಕೂಡಲೇ ಸುಂದರ ರೈ ಮಂದಾರರವರನ್ನು ಸಂಪರ್ಕಿಸಬಹುದಾಗಿದೆ.

 

ಅನುಭವಿ ಸಂಪನ್ಮೂಲ ವ್ಯಕ್ತಿಗಳು ಸಿನಿಮಾ, ನಾಟಕಗಳಲ್ಲಿ ಈಗಾಗಲೇ ಹೆಸರು ಗಳಿಸಿದ ರಾಜ್ಯದ ಪ್ರಸಿದ್ಧ ಕಲಾವಿದರು, ತಂತ್ರಜ್ಞರಿಂದ ತರಬೇತಿ ನಡೆಯಲಿದೆ. ಮುಖ್ಯವಾಗಿ ವಿಜಯ ಕುಮಾರ್ ಕೋಡಿಯಾಲ್‌ಬೈಲ್, ನವೀನ್ ಡಿ’ಪಡೀಲ್, ಶಿವಧ್ವಜ್ ಶೆಟ್ಟಿ, ಎಂ.ಕೆ ಮಠ, ಧೂಳ್‌ರಾಜ್,ಅಂಬರೀಷ್ ಸಾರಂಗಿ, ನಿತಿನ್ ರೈ ಕುಕ್ಕುವಳ್ಳಿ ಮತ್ತು ಸುಂದರ ರೈ ಮಂದಾರ ಸೇರಿದಂತೆ ಹಲವು ಅನುಭವಿ ಕಲಾವಿದರು ತರಬೇತಿ ನೀಡಲಿದ್ದಾರೆ.

ಜೂ.1 ರಿಂದ ತರಬೇತಿ ಆರಂಭ
ತರಬೇತಿಯು ಜೂ.೦೧ ರಿಂದ ಆರಂಭವಾಗುತ್ತಿದ್ದು ಎರಡು ತಿಂಗಳುಗಳ ಕಾಲ ನಡೆಯಲಿದೆ. ತರಬೇತಿಯಲ್ಲಿ ಸಿನಿಮಾ, ನಾಟಕ ಅಭಿನಯ ಸೇರಿದಂತೆ ಇತರ ವಿಷಯಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ತರಬೇತಿಗೆ ಸೇರಲಿಚ್ಚಿಸುವವರು ಈ ಕೂಡಲೇ ಮೊಬೈಲ್ ನಂಬರ್ ಮೊ.9980202309 ಗೆ ಸಂಪರ್ಕಿಸಬಹುದು ಎಂದು ಮಂದಾರ ಕ್ರಿಯೇಷನ್ಸ್‌ನ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here