ಪುತ್ತೂರು : ನೆಟ್ಟಣಿಗೆ ಮುಡ್ನೂರು ಒಕ್ಕೂಟದ ದೇಲಂಪಾಡಿ ಕುತ್ತಿಮುಂಡ ಪದ್ಮನಾಭಗೌಡರವರು ಅನಾರೋಗ್ಯದಿಂದಿದ್ದು ಇವರಿಗೆ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ನಿಂದ ಸಹಾಯಧನ ಚೆಕ್ ವಿತರಣೆ ಮಾಡಲಾಯಿತು. ನೆಟ್ಟಣಿಗೆ ಮೂಡ್ನೂರು ಒಕ್ಕಲಿಗ ಸ್ವಸಹಾಯ ಸಂಘಗಳ ಒಕ್ಕೂಟ ಅಧ್ಯಕ್ಷ ಶೇಷಪ್ಪ ಗೌಡ ಮೆಣಸಿನಕಾನ, ಕುತ್ತಿಮುಂಡ ತರವಾಡು ಮನೆಯ ಹರೀಶ್ ಗೌಡ, ಟ್ರಸ್ಟ್ ಮೇಲ್ವಿಚಾರಕ ವಿಜಯ ಕುಮಾರ್, ಪ್ರೇರಕ ಶ್ರೀಕಾಂತ್ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.