- ಸಂಚಾರ ಪೊಲೀಸ್ ಠಾಣೆ (ಪ್ರ), ಉಪ್ಪಿನಂಗಡಿ ಪೊಲೀಸ್ ಠಾಣೆ (ದ್ವಿ)
ಪುತ್ತೂರು: ಪುತ್ತೂರು ಉಪವಿಭಾಗದ ಎಲ್ಲಾ ಅಧಿಕಾರಿ, ಸಿಬ್ಬಂದಿಗಳ ಕ್ರಿಕೆಟ್ ಕ್ರೀಟಾಪಂದ್ಯಾಟ ಮೇ ೧೫ರಂದು ಸಂತ ಫಿಲೋಮಿನಾ ಕಾಲೇಜು ಮೈದಾನದಲ್ಲಿ ನಡೆಯಿತು. ಪಂದ್ಯಾಟದಲ್ಲಿ ಸಂಚಾರ ಪೊಲೀಸ್ ಠಾಣೆ ಪ್ರಥಮ ಮತ್ತು ಉಪ್ಪಿನಂಗಡಿ ಪೊಲೀಸ್ ಠಾಣೆ ಯ ತಂಡ ದ್ವಿತೀಯ ಸ್ಥಾನ ಪಡೆದಿದೆ. ಅತ್ಯುತ್ತಮ ಬೌಲರ್ ಆಗಿ ಉಪ್ಪಿನಂಗಡಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಕುಮಾರ್ ಕಾಂಬ್ಳೆ, ಅತ್ಯುತ್ತಮ ಬ್ಯಾಟ್ಸ್ ಮನ್ ಪುತ್ತೂರು ಸಂಚಾರ ಠಾಣೆಯ ಶಿವಕುಮಾರ್, ಆಲ್ ರೌಂಡರ್ ಆಟಗಾರ ಪುತ್ತೂರು ಸಂಚಾರ ಠಾಣೆಯ ಪ್ರಶಾಂತ್ ರೈ ಬಹುಮಾನ ಪಡೆದರು. ಭಾನುಪ್ರಕಾಶ್, ಸಂತೋಷ್, ರವಿ ಆಚಾರ್ಯ ಮತ್ತು ರಜಾಕ್ ರವರುರವರು ನಿರ್ಣಯಕರಾಗಿ ಸಹಕರಿಸಿದರು.