ಕಬಕ : ಕುಳ ಗ್ರಾಮದ ಓಜಾಲ ಹಿ.ಪ್ರಾ.ಶಾಲೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚಿದಾನಂದ ಪಿ.ರವರ ಅಧ್ಯಕ್ಷತೆಯಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು. ಒಂದನೇ ತರಗತಿಗೆ ದಾಖಲಾದ ವಿದ್ಯಾರ್ಥಿಗಳಿಗೆ ಬಲೂನ್ ಹಾಗೂ ಪೋಷಕರಿಗೆ ಹೂ ನೀಡುವುದರ ಮೂಲಕ ಸ್ವಾಗತಿಸಲಾಯಿತು. ಆರೋಗ್ಯ ಇಲಾಖೆಯಿಂದ ಡೆಂಗ್ಯೂ ಹಾಗೂ ಟೊಮೆಟೊ ಜ್ವರದ ಬಗ್ಗೆ ಮಾಹಿತಿ ನೀಡಲಾಯಿತು. ಶಾಲಾ ಮುಖ್ಯಗುರು ಸಂಜೀವ ಮಿತ್ತಳಿಕೆ ಪ್ರಾಸ್ತವಿಕ ಮಾತನಾಡಿ ಈ ವರ್ಷವನ್ನು ಕಲಿಕಾ ಚೇತರಿಕ ವರ್ಷವಾಗಿ ಆಚರಿಸಲಾಗುತ್ತಿದೆ. ಮತ್ತು ಆ ಯೋಜನೆ ಬಗ್ಗೆ ತಿಳಿಸಿದರು. ಕುಡಿಪ್ಪಾಡಿ ಗ್ರಾಮ ಪಂಚಾಯತ್ ಸದಸ್ಯ ಸೋಮಶೇಖರ ಪೂಜಾರಿ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸುಮಯ್ಯ, ಸದಸ್ಯ ಹೊನ್ನಪ್ಪ ಗೌಡ, ಅಂಗನವಾಡಿ ಶಿಕ್ಷಕಿ ಭವಾನಿ, ಅರೋಗ್ಯ ಕಾರ್ಯಕರ್ತೆಯರಾದ ಕವಿತಾ, ಕ್ಲೆಮೆಂಟಿನಾ, ಆಶಾ ಕಾರ್ಯಕರ್ತೆ ಮೋಹಿನಿ ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿ ವಿಲ್ಮಾ ಸೀಕ್ವೆರಾ ಸ್ವಾಗತಿಸಿ, ಗೌರವ ಶಿಕ್ಷಕಿ ಚಿತ್ರಲೇಖ ವಂದಿಸಿದರು. ಶಿಕ್ಷಕಿ ಜೆಸಿಂತ ಕಾರ್ಯಕ್ರಮ ನಿರೂಪಿಸಿದರು. ಗೌರವ ಶಿಕ್ಷಕಿ ನವ್ಯಶ್ರೀ, ಕಂಪ್ಯೂಟರ್ ಶಿಕ್ಷಕಿ ನವ್ಯಶ್ರೀ, ಅಕ್ಷರ ದಾಸೋಹ ಸಿಬಂದಿ ಕುಸುಮ, ವನಿತಾ, ಹರಿಣಾಕ್ಷಿ ಸಹಕರಿಸಿದರು.