ಪುತ್ತೂರು : ಕಲಾಗ್ರಾಮ ಕಲ್ಮಡ್ಕ, ಯುವಕ ಮಂಡಲ ಕಳಂಜ, ಸಾರ್ವಜನಿಕ ದೇವತಾರಾಧನಾ ಸಮಿತಿ ಕೊರತ್ತಿಕಲ್ಲು ಇದರ ಆಶ್ರಯದಲ್ಲಿ ನಡೆಸಿದ ಅಂತರ್ ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆಯಲ್ಲಿ ಮಂಗಳೂರು ಬಿಐಟಿಯ ಉಪನ್ಯಾಸಕಿ ಮುಬೀನಾ ಪರ್ವಿನ್ ತಾಜ್ ನಾಯಕತ್ವದ ಆರಾಧನಾ ಭಜನಾ ತಂಡ ಪ್ರಥಮ ಸ್ಥಾನ ಪಡೆದು ಭಜನಾ ಸಮರ್ಥ-2022 ಪ್ರಶಸ್ತಿ ಪಡೆದುಕೊಂಡಿದೆ. ತಂಡದಲ್ಲಿ ಮುಬೀನಾ ಪರ್ವಿನ್ ತಾಜ್, ಪ್ರಸನ್ನ ಕುಮಾರ್ ಕಡಬ, ಶಮಾ ಪರ್ವಿನ್ ತಾಜ್ ಪುತ್ತೂರು, ಅನುಶ್ರೀ ಸಾಮೆತ್ತಡ್ಕ, ಪ್ರಣಮ್ಯ ಕಡಬ, ಅಭಿಜ್ಞಾ ಉಜಿರೆ, ಅನ್ವಿತ್ ಉಜಿರೆ, ವೇದಾಂತ್ ಉಜಿರೆ ಹಾಡುಗಾರಿಕೆಯಲ್ಲಿ ಭಾಗವಹಿಸಿದರು. ಅತ್ರೇಯ ಸುರತ್ಕಲ್ ಹಾರ್ಮೋನಿಯಂ ಮತ್ತು ಸ್ಕಂದಾ ಪುತ್ತೂರು ತಬಲಾದಲ್ಲಿ ಸಹಕರಿಸಿದರು.