ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ 5ಸಾವಿರ ಗಡಿ ತಲುಪಲಿರುವ ಹಿರಿಯ ಸಾಹಿತಿ ಪ್ರೊ. ವಿ.ಬಿ. ಅರ್ತಿಕಜೆಯವರ ಚಿಂತನ ಗಾಥ ವಿಮರ್ಶಾ ಸ್ಪರ್ಧೆ

0

ಪುತ್ತೂರು: ಕಳೆದ 13 ವರ್ಷಗಳಿಂದ ಪ್ರತಿದಿನ ಸುದ್ದಿ ಬಿಡುಗಡೆಯಲ್ಲಿ ಪ್ರಕಟವಾಗುತ್ತಿರುವ ಹಿರಿಯ ಸಾಹಿತಿ ಪ್ರೊ. ವಿ.ಬಿ ಅರ್ತಿಕಜೆಯವರ ಚಿಂತನ ಗಾಥಾ ಸದ್ಯವೇ 5000 ದ ಗಡಿಯನ್ನು ತಲುಪಲಿದ್ದು ಇದರ ಸ್ಮರಣೆಗಾಗಿ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ ವತಿಯಿಂದ ವಿಮರ್ಶಾ ಸ್ಪರ್ಧೆ ಏರ್ಪಡಿಸಲಾಗಿದೆ.

ವಿದ್ಯಾರ್ಥಿ ವಿಭಾಗ ಹಾಗೂ ಸಾರ್ವಜನಿಕ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದ್ದು, ಲೇಖನವು ವಿಮರ್ಶೆ ಅಥವಾ ಅನಿಸಿಕೆ ರೂಪದಲ್ಲಿರಬಹುದು, ಅದು 750 ಪದಗಳ ಒಳಗಿರಬೇಕು, ಪ್ರಥಮ, ದ್ವಿತೀಯ, ತೃತೀಯ ಹಾಗೂ ಪ್ರೋತ್ಸಾಹಕರ ಬಹುಮಾನವಾಗಿ ಮೌಲ್ಯಧಾರಿತ ಪುಸ್ತಕ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. ಭಾಗವಹಿಸಲು ಪ್ರಾದೇಶಿಕ ಪರಿಮಿತಿ ಇರುವುದಿಲ್ಲ, ಸಂಘಟಕರ ತೀರ್ಮಾನವೇ ಅಂತಿಮವಾಗಿದ್ದು, ಲೇಖನವನ್ನು ಜೂನ್ 15ರ ಒಳಗಾಗಿ  [email protected]  ಗೆ ಇಮೇಲ್ ಮೂಲಕ ಯಾ ಪುತ್ತೂರು ಉಮೇಶ್ ನಾಯಕ್, ಅಧ್ಯಕ್ಷರು,ಕನ್ನಡ ಸಾಹಿತ್ಯ ಪರಿಷತ್ತು, ಪುತ್ತೂರು ತಾಲೂಕು ಘಟಕ ಶ್ರೀರಾಮ ಸೌಧ, ದರ್ಬೆ ಪುತ್ತೂರು ವಿಳಾಸಕ್ಕೆ ಕಳುಹಿಸುವುದು ಎಂದು ಕನ್ನಡ ಸಾಹಿತ್ಯ ಪರಿಷತ್ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here