ನೆಲ್ಯಾಡಿ: ಮುಳಿಯ ಜ್ಯುವೆಲ್ಸ್’ ಸಿಲ್ವರಿಯಾ’ ಶುಭಾರಂಭ

0

 

ನೆಲ್ಯಾಡಿ: ಚಿನ್ನ ಹಾಗೂ ಬೆಳ್ಳಿಯ ಮಾರಾಟದಲ್ಲಿ ಹೆಸರುಗಳಿಸಿರುವ ಪುತ್ತೂರಿನ ಮುಳಿಯ ಜ್ಯುವೆಲ್ಸ್‌ನವರ ಬೆಳ್ಳಿ ಆಭರಣಗಳ ಮತ್ತು ಬೆಳ್ಳಿ ಪರಿಕರಗಳ ಅತ್ಯಮೋಘ ಸಂಗ್ರಹಗಳ ಮಳಿಗೆ ‘ಮುಳಿಯ ಸಿಲ್ವರಿಯಾ’ ನೆಲ್ಯಾಡಿಯ ದುರ್ಗಾಶ್ರೀ ಟವರ್‍ಸ್‌ನಲ್ಲಿ ಮೇ 18ರಂದು ಸಂಜೆ ಶುಭಾರಂಭಗೊಂಡಿತು.

ಕಳೆದ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿರುವ ಸ್ಥಳೀಯ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳಾದ ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ಅಂಕಿತ್, ದಿಶಾ ಎಂ.ಪಿ., ಅಪೇಕ್ಷಾ ಎಸ್.ಎಸ್., ಕೊಣಾಲು ಪ್ರೌಢಶಾಲೆಯ ಜೋಸ್ವಾ ಎನ್.ಜೆ., ಪಡುಬೆಟ್ಟು ಶಾಲೆಯ ರಚನ್‌ರವರು ದೀಪೋಜ್ವಲನೆ ಮಾಡುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಳಿಯ ಸಂಸ್ಥೆಯ ಸಿಎಂಡಿ ಮುಳಿಯ ಕೇಶವ ಪ್ರಸಾದ್‌ರವರು ಮಾತನಾಡಿ, ನೆಲ್ಯಾಡಿಯಲ್ಲಿ ಆರಂಭಿಸಿರುವ ಶಾಖೆ ಕಂಪನಿ ಓನ್ಡ್ ಕಂಪನಿ ಆಪರೇಟೆಡ್ ಪ್ರಾಂಚೈಸಿಯಾಗಿದೆ. ಮುಂದಿನ ದಿನಗಳಲ್ಲಿ ಇದೇ ರೀತಿಯ ಹಲವು ಶಾಖೆ ಆರಂಭಿಸುವ ಯೋಜನೆಯೂ ಇದೆ. ಜನರೇ ಹೂಡಿಕೆ ಮಾಡುವ ಮೂಲಕ ಉದ್ಯಮದಲ್ಲಿ ತೊಡಗಿಸಿಕೊಳ್ಳುವುದಕ್ಕೂ ಮುಳಿಯ ಸಂಸ್ಥೆ ಅವಕಾಶ ಮಾಡಿಕೊಡುತ್ತಿದ್ದು ರೂ. ೩೫ ಲಕ್ಷದಿಂದ ಹೂಡಿಕೆ ಆರಂಭಗೊಳ್ಳಲಿದೆ ಎಂದರು. ಪ್ರಾಂಚೈಸಿ ಓನ್ಡ್, ಕಂಪನಿ ಆಪರೇಟೆಡ್ ಹಾಗೂ ಪ್ರಾಂಚೈಸಿ ಓನ್ಡ್, ಪ್ರಾಂಚೈಸಿ ಆಪರೇಟೆಡ್ ಯೋಜನೆಯನ್ನೂ ಸಂಸ್ಥೆ ಪರಿಚಯಿಸುತ್ತಿದೆ. ಇದು ಅಲ್ಲದೇ ಪ್ರಗತಿ ಪಥದಲ್ಲಿ ಪಾಲುದಾರ ಎಂಬ ಯೋಜನೆಯನ್ನು ಸಂಸ್ಥೆ ಪ್ರಸ್ತುತ ಪಡಿಸುತ್ತಿದ್ದು ರೂ. ೭೫ ಸಾವಿರಕ್ಕಿಂತ ಹೆಚ್ಚು ಮುಂಗಡ ಹಣ ಪಾವತಿ ಮಾಡಿದಲ್ಲಿ ೧೦ ತಿಂಗಳ ನಂತರ ಶೇ.೮ರಷ್ಟು ವೇಸ್ಟೆಜ್‌ನಲ್ಲಿ ಬೋನಸ್ ನೀಡಲಾಗುವುದು ಎಂದರು. ಬೆಳ್ಳಿ ಹಾಗೂ ಚಿನ್ನ ದೇಹದಿಂದ ವಿಷದ ಅಂಶವನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ. ಚಿನ್ನ ಸರ್ವಕಾಲಿಕ, ಸರ್ವದೇಶದಿಂದಲೂ ಪುರಷ್ಕ್ರತಗೊಂಡಿದೆ. ಯಾವುದೇ ಸಂದರ್ಭದಲ್ಲಿ ಯಾವುದೇ ಜಾಗಕ್ಕೆ ಹೋದರೂ ಚಿನ್ನ ಹಾಗೂ ಬೆಳ್ಳಿಗೆ ಬೇಡಿಕೆ ಕಡಿಮೆಯಾಗುವುದಿಲ್ಲ ಎಂದು ಹೇಳಿದ ಕೇಶವ ಪ್ರಸಾದ್‌ರವರು, ೮ ವರ್ಷಗಳ ಹಿಂದೆ ನೆಲ್ಯಾಡಿಯಲ್ಲಿ ಮುಳಿಯ ಜ್ಯುವೆಲ್ ಸಿಪ್‌ನ ಪಾವತಿ ಕೇಂದ್ರ ಆರಂಭಿಸಲಾಗಿತ್ತು. ಇದಕ್ಕೆ ಇಲ್ಲಿನ ಜನರು ಒಳ್ಳೆಯ ಸಹಕಾರ ನೀಡಿದ್ದಾರೆ. ಇದೇ ರೀತಿಯಲ್ಲಿ ಮುಂದಿನ ದಿನವೂ ಸಹಕಾರ ನೀಡಿ, ಸಂಸ್ಥೆಯನ್ನು ಬೆಳೆಸಬೇಕೆಂದು ಹೇಳಿದರು.


ಸಂಸ್ಥೆಯ ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ ಅವರು ಮಾತನಾಡಿ, ೧೯೪೪ರಲ್ಲಿ ಆರಂಭಗೊಂಡ ಮುಳಿಯ ಜ್ಯುವೆಲ್ಸ್ ಗ್ರಾಹಕರಿಗೆ ಗುಣಮಟ್ಟದ ಹಾಗೂ ಅತ್ಯುತ್ತಮ ಸೇವೆ ನೀಡುತ್ತಿದೆ. ಸಂಸ್ಥೆಯ ವಿಸ್ತರಣೆ ಸಲುವಾಗಿ ೨೦೦೮ರಲ್ಲಿ ಮಡಿಕೇರಿ, ೨೦೦೯ರಲ್ಲಿ ಗೋಣಿಕೊಪ್ಪ, ೨೦೧೧ರಲ್ಲಿ ಪುತ್ತೂರಿನಲ್ಲಿ ವಿಸ್ತೃತ ಮಳಿಗೆ, ೨೦೧೨ ಬೆಂಗಳೂರಿನಲ್ಲಿ, ೨೦೧೮ರಲ್ಲಿ ಬೆಳ್ತಂಗಡಿಯಲ್ಲಿ ಶಾಖೆ ಆರಂಭಿಸಲಾಗಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸಂಸ್ಥೆ ಬೆಳೆಸುತ್ತಾ ಬಂದಿದೆ. ನೆಲ್ಯಾಡಿಯಲ್ಲಿ ತಿಂಗಳ ಹೂಡಿಕೆಯ ಪಾವತಿ ಕೇಂದ್ರ ಇದ್ದು ಇದಕ್ಕೆ ಉತ್ತಮ ರೀತಿಯ ಜನಸ್ಪಂದನೆ ಸಿಕ್ಕಿದೆ. ಇದರ ಮುಂದಿನ ಭಾಗವಾಗಿ ಈಗ ಬೆಳ್ಳಿ ಆಭರಣ ಮತ್ತು ಪರಿಕರಗಳ ಮಳಿಗೆ ಆರಂಭಿಸಲಾಗಿದೆ. ನೆಲ್ಯಾಡಿಯ ಮಹಾಜನತೆಗೆ ಈ ಸಂಸ್ಥೆಯನ್ನು ಸಮರ್ಪಿಸುತ್ತಿದ್ದೇವೆ. ಇಲ್ಲಿನ ಜನತೆ ಪ್ರೋತ್ಸಾಹಿಸಿ ಮುಳಿಯ ಸಂಸ್ಥೆಯನ್ನು ಇನ್ನಷ್ಟೂ ಎತ್ತರಕ್ಕೇರಿಸಲು ಸಹಕರಿಸಬೇಕೆಂದು ಹೇಳಿದರು.

 

 


ದುರ್ಗಾಶ್ರೀ ಟವರ್‍ಸ್ ಮಾಲಕ ಸತೀಶ್ ಕೆ.ಎಸ್.,ರವರು ಮಾತನಾಡಿ, ಕಡಿಮೆ ದರ ಹಾಗೂ ಒಳ್ಳೆಯ ಗುಣಮಟ್ಟದ ಸೇವೆಯಲ್ಲಿ ಮುಳಿಯ ಜ್ಯುವೆಲ್ಸ್ ಹೆಸರಾಂತ ಸಂಸ್ಥೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಸಂಸ್ಥೆ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ನೆಲ್ಯಾಡಿ ಜನತೆ ಬೆಳ್ಳಿಯ ಆಭರಣ ಮತ್ತು ಪರಿಕರಗಳಿಗೆ ಪುತ್ತೂರಿಗೆ ಹೋಗಬೇಕಾಗಿತ್ತು. ಈಗ ನೆಲ್ಯಾಡಿಯಲ್ಲಿಯೇ ಸಿಗುವಂತೆ ಆಗಿದೆ. ಇಲ್ಲಿನ ಜನರು ಮುಳಿಯ ಸಂಸ್ಥೆಗೆ ಸಹಕಾರ ನೀಡಿ ಬೆಳೆಸಬೇಕೆಂದು ಹೇಳಿದರು. ಮುಳಿಯ ಸಂಸ್ಥೆಯ  ಸರಾಫ್  ಶ್ಯಾಂ ಭಟ್, ನೆಲ್ಯಾಡಿ ಉದ್ಯಮಿ ರವಿಪ್ರಸಾದ್ ಆಚಾರ್ಯ, ಮುಳಿಯ ಕುಟುಂಬಸ್ಥರು, ಮುಳಿಯ ಸಂಸ್ಥೆಯ ಸಿಬ್ಬಂದಿಗಳ, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ನಾಮ್‌ದೇವ ಮಲ್ಯ ಸ್ವಾಗತಿಸಿ, ನೆಲ್ಯಾಡಿ ಶಾಖೆಯ ವ್ಯವಸ್ಥಾಪಕ ಪ್ರಶಾಂತ್ ವಂದಿಸಿದರು. ಕಲಾವಿದ ಉದಯಕುಮಾರ್ ಲಾಯಿಲ ನಿರೂಪಿಸಿದರು. ಸಂದೇಶ ಪ್ರಾರ್ಥಿಸಿದರು.

ಸನ್ಮಾನ:
ಆರ್ಯಭಟ ಪ್ರಶಸ್ತಿಗೆ ಭಾಜನರಾಗಿರುವ ಕಲಾವಿದ ಉದಯಕುಮಾರ್ ಲಾಯಿಲ ಇವರನ್ನು ಮುಳಿಯ ಸಂಸ್ಥೆಯ ಪರವಾಗಿ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮ:
ಶುಭಾರಂಭದ ಪ್ರಯುಕ್ತ ಭರತನಾಟ್ಯ, ಡ್ಯಾನ್ಸ್, ಹಾಡು ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ನೆಲ್ಯಾಡಿಯ ನಟವರ್ಯ ಡ್ಯಾನ್ಸ್ ಸ್ಟುಡಿಯೋದ ವಿದ್ಯಾರ್ಥಿಗಳಿಗೆ ಭರತನಾಟ್ಯ, ಡ್ಯಾನ್ಸ್ ನಡೆಯಿತು.

 

 

LEAVE A REPLY

Please enter your comment!
Please enter your name here