ಖ್ಯಾತ ಪಿಟೀಲು ವಾದಕ ಚೆನ್ನೈಯ ಡಾ| ಮುಲೈವಾಸಲ್ ಜಿ ಚಂದ್ರಮೌಳಿ ಅವರಿಂದ ಮೇ 23 ರಿಂದ ಬೊಳುವಾರಿನಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಶಿಬಿರ

0

 

ಪುತ್ತೂರು: ಖ್ಯಾತ ಪಿಟೀಲು ವಾದಕ ಚೆನ್ನೈಯ ಡಾ| ಮುಲೈವಾಸಲ್ ಜಿ ಚಂದ್ರಮೌಳಿ ಅವರಿಂದ ಮೇ 23 ರಿಂದ 25ರ ತನಕ ಬೊಳುವಾರು ನೇಸರ ಸಪ್ತಸ್ವರ ಸಂಗೀತ ಕಲಾಶಾಲೆಯಲ್ಲಿ ಪಿಟೀಲು, ಹಾಡುಗಾರಿಕೆಯ ಕರ್ನಾಟಕ ಶಾಸ್ತ್ರೀಯ ಸಂಗೀತ ಶಿಬಿರ ನಡೆಯಲಿದೆ. ಬೆಳಿಗ್ಗೆ 10 ರಿಂದ 12.45ರ ತನಕ ವಿದ್ವತ್ ಗ್ರೇಡ್ ವಿದ್ಯಾರ್ಥಿಗಳಿಗೆ, ಸಂಜೆ ಗಂಟೆ 4.30ರಿಂದ 6.30ರ ತನಕ ಜೂನಿಯರ್ ಮತ್ತು ಸೀನಿಯರ್ ವಿದ್ಯಾರ್ಥಿಗಳಿಗೆ, ಮೇ 25ಕ್ಕೆ ಸಂಜೆ ಶಿಬಿರಾರ್ಥಿಗಳಿಂದ ಹಾಡುಗಾರಿಕೆ ನಡೆಯಲಿದೆ. ಆಸಕ್ತರು ಮೇ 22ರ ಒಳಗಾಗಿ ಹೆಸರು ನೋಂದಾಯಿಸಲು ಮೊ: 9482337231 ಅನ್ನು ಸಂಪರ್ಕಿಸುವಂತೆ ಸಂಸ್ಥೆಯ ನಿರ್ದೇಶಕರಾದ ರಮಾ ಪ್ರಭಾರ್, ಶ್ರೀ ಮಹಾಲಿಂಗೇಶ್ವರ ಭಟ್ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here