ಶ್ರೀ ರಾಮಕೃಷ್ಣ ಪ್ರೌಢ ಶಾಲೆಗೆ ಶೇಕಡಾ 99 ಫಲಿತಾಂಶ

0

  • ಸೌಮ್ಯಾ ರಾಜ್ಯದಲ್ಲಿ ತೃತೀಯ, 26 ವಿದ್ಯಾರ್ಥಿಗಳಿಗೆ ವಿಶಿಷ್ಟ ಶ್ರೇಣಿ, ಶಾಲೆಗೆ ಎ ಗ್ರೇಡ್

 

 

ಪುತ್ತೂರು: ಇಲ್ಲಿನ ಶ್ರೀ ರಾಮಕೃಷ್ಣ ಪ್ರೌಢ ಶಾಲೆಯಲ್ಲಿ ಆಂಗ್ಲ ಮಾಧ್ಯಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾದ 60 ವಿದ್ಯಾರ್ಥಿಗಳಲ್ಲಿ 59 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡಾ 98.33 ಫಲಿತಾಂಶ ದಾಖಲಾಗಿದೆ. ಎ+ 20, ಎ 21, ಬಿ+ 14, ಬಿ 01 ಹಾಗೂ 03 ವಿದ್ಯಾರ್ಥಿಗಳು ಸಿ+ ಶ್ರೇಣಿಯೊಂದಿಗೆ ಉತ್ತೀರ್ಣರಾಗಿರುತ್ತಾರೆ. 623 ಅಂಕಗಳನ್ನು ಪಡೆದುಕೊಂಡಿರುವ ಸೌಮ್ಯಾ ಕೆ – 623 (ಸುರೇಶ್ ಕೆ ಮತ್ತು ಗಾಯತ್ರಿ ಸುರೇಶ್‌ರವರ ಪುತ್ರಿ) ರಾಜ್ಯದಲ್ಲಿ ತೃತೀಯ ಸ್ಥಾನ ಹಾಗೂ ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ದ್ವಿತೀಯ ಸ್ಥಾನವನ್ನು ನಿಶ್ಮಿತಾ – 622 (ಮಂಜಪ್ಪ ಮತ್ತು ಉಮಾವತಿಯವರ ಪುತ್ರಿ) ಮತ್ತು ತೃತೀಯ ಸ್ಥಾನವನ್ನು ನಿಧಿ ಎಚ್.ವಿ. – 617 (ಹರೀಶ್ ಗೌಡ ಕೆ.ಎಸ್. ಮತ್ತು ವಸಂತಿ ಎಚ್ ಗೌಡ ರವರ ಪುತ್ರಿ) ಅಂಕಗಳನ್ನು ಪಡೆದಿರುತ್ತಾರೆ. ಕನ್ನಡ ಮಾಧ್ಯಮದಿಂದ ಪರೀಕ್ಷೆಗೆ ಹಾಜರಾದ 84 ವಿದ್ಯಾರ್ಥಿಗಳಲ್ಲಿ 77 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡಾ 91.67 ಫಲಿತಾಂಶ ಪಡೆದಿದೆ. ಎ+ 6, ಎ 17, ಬಿ+ 21, ಬಿ 19, ಸಿ+ 13 ಹಾಗೂ 01 ವಿದ್ಯಾರ್ಥಿಗಳು ಸಿ ಶ್ರೇಣಿಯೊಂದಿಗೆ ಉತ್ತೀರ್ಣರಾಗಿರುತ್ತಾರೆ. ಪ್ರಥಮ ಸ್ಥಾನವನ್ನು ಕೃಷ್ಣಪ್ರಸಾದ್ – 588 (ಮನೋಹರ ಆಚಾರ್ಯ ಮತ್ತು ಪ್ರೇಮಲತಾ ರವರ ಪುತ್ರ) ಮತ್ತು ಸಂತೋಷ್ ಎಸ್ – 588 (ಸಂಗಪ್ಪ ಮತ್ತು ಮಲ್ಲವ್ವ ರವರ ಪುತ್ರ), ದ್ವಿತೀಯ ಸ್ಥಾನವನ್ನು ಅಶ್ವಿಜ ಕೆ – 586 (ರವೀಂದ್ರ ಕೆ ಮತ್ತು ನೀಲಮ್ಮ ಕೆ ಯವರ ಪುತ್ರಿ) ಮತ್ತು ತೃತೀಯ ಸ್ಥಾನವನ್ನು ವಿಖ್ಯಾತ್ ಜೆ ರೈ – 574 (ಜಯಕರ ರೈ ಮತ್ತು ಗೀತಾ ಜೆ ರೈ ರವರ ಪುತ್ರ) ಪಡೆದಿರುತ್ತಾರೆ.

ವಿಶಿಷ್ಟತಾ ಶ್ರೇಣಿಯಲ್ಲಿ ಶ್ರಮಿಕ್ ರೈ – 613 (ರಮೇಶ್ ರೈ ಮತ್ತು ಯಶೋಧಾ ರೈ ಯವರ ಪುತ್ರ) ಭೂಮಿಕಾ ಜಿ – 610 (ಗಣೇಶ್ ಆಚಾರ್ಯ ಮತ್ತು ಚಂದ್ರಕಲಾ ರವರ ಪುತ್ರಿ) ಚಿಂತನಾ ಎನ್ – 609 (ಮೋನಪ್ಪ ಪೂಜಾರಿ ಮತ್ತು ಸವಿತಾ ರವರ ಪುತ್ರಿ), ಶೃತಿರಂಜಿನಿ 608 (ಸಚೀಂದ್ರ ಎನ್ ಮತ್ತು ಶಕುಂತಳಾ ರವರ ಪುತ್ರಿ) ಮನಸ್ವಿ ವೈ – 606 (ರಮೇಶ್ ಕುಲಾಲ್ ಮತ್ತು ಗೀತಾ ಪಿ ಯವರ ಪುತ್ರಿ), ರಿಯಾ ರಾಮ್ – 606 (ರಾಮ ಕೆ ಮತ್ತು ಪ್ರಭಾವತಿ ಕೆ ಯವರ ಪುತ್ರಿ), ಮನ್ವಿತಾ ವೈ – 605 (ರಮೇಶ್ ಕುಲಾಲ್ ಮತ್ತು ಗೀತಾ ಪಿ ಯವರ ಪುತ್ರಿ), ಲೋಕೇಶ್ವರಿ ಬಿ – 603 (ರಾಮಕೃಷ್ಣ ಗೌಡ ಬಿ ಮತ್ತು ಉಮಾವತಿಯವರ ಪುತ್ರಿ), ಶ್ರೇಯಾ ಎಂ – 598 (ವಿಶ್ವಕುಮಾರ್ ಮತ್ತು ವೀಣಾ ಎಂ ರವರ ಪುತ್ರಿ) , ಭವಿಷ್ ರೈ – 595 (ರಾಜೇಶ್ ರೈ ಮತ್ತು ಆಶಾಕಿರಣ ಆರ್ ರೈ ಯವರ ಪುತ್ರ), ಧನುಷ್ ಎ – 591 (ಪರಮೇಶ್ವರ ಎ ಮತ್ತು ಶೈಲಜಾ ರವರ ಪುತ್ರ), ಮನಸ್ವಿ ಪ್ರಭು – 586 (ಆನಂದ ಪ್ರಭು ಪಿ ಮತ್ತು ಸುಚಿತ್ರ ಪ್ರಭುರವರ ಪುತ್ರಿ), ಸಂಚಿತಾ ಕೆ – 578 (ಕೃಷ್ಣಮೂರ್ತಿ ಮತ್ತು ವಿಜಯ ಕೆ ಯವರ ಪುತ್ರಿ), ಲೀಲಾಧರ – 573 (ಚೆನ್ನಪ್ಪ ಗೌಡ ಮತ್ತು ಗುಲಾಬಿ ಯವರ ಪುತ್ರ), ಜನನಿ ಪ್ರಭು – 571 (ಮನೋಹರ ಪ್ರಭು ಬಿ ಮತ್ತು ಮಧುಶ್ರೀ ಪ್ರಭು ಬಿ ಯವರ ಪುತ್ರಿ), ತೇಜಸ್ವಿ – 570 (ಶಿವರಾಮ ಗೌಡ ಮತ್ತು ಸವಿತಾ ರವರ ಪುತ್ರ), ಶ್ರೀವತ್ಸ – 568(ಎಸ್ ಶಂಕರ ನಾರಾಯಣ ಮಡಪುಳಿತ್ತಾಯ ಮತ್ತು ಪ್ರತಿಭಾ ಶಂಕರ್ ರವರ ಪುತ್ರ), ಸ್ನೇಹಿತ್ ಎಂ – 563 (ಕೃಷ್ಣಪ್ಪ ಗೌಡ ಮತ್ತು ಕುಸುಮಾವತಿ ಯವರ ಪುತ್ರ) ಹಾಗೂ ಶ್ರೀರಕ್ಷಾ – 563 (ಸುರೇಶ್ ಶೆಟ್ಟಿ ಮತ್ತು ರಮಾ ರವರ ಪುತ್ರಿ) ಉತ್ತೀರ್ಣರಾಗಿರುತ್ತಾರೆ ಎಂದು ಶಾಲಾ ಸಂಚಾಲಕರಾದ ಕಾವು ಹೇಮನಾಥ ಶೆಟ್ಟಿ ಮತ್ತು ಮುಖ್ಯೋಪಾಧ್ಯಾಯರಾದ ಜಯಲಕ್ಷ್ಮಿ ಎ ಯವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here