ನೆಲ್ಯಾಡಿ: 2021-22ನೇ ಶೈಕ್ಷಣಿಕ ಸಾಲಿನಲ್ಲಿ ನಡೆದ 10ನೇ ತರಗತಿಯ ರಾಜ್ಯ ಮಟ್ಟದ ವಾರ್ಷಿಕ ಪರೀಕ್ಷೆಯಲ್ಲಿ ನೆಲ್ಯಾಡಿ ಸೂರ್ಯನಗರ ಶ್ರೀರಾಮ ವಿದ್ಯಾಲಯಕ್ಕೆ 100 ಶೇ. ಫಲಿತಾಂಶ ಬಂದಿದೆ.
ಸಂಸ್ಥೆಯಿಂದ ಪರೀಕ್ಷೆಗೆ ಹಾಜರಾದ 13 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಶೇ.100 ಫಲಿತಾಂಶ ಬಂದಿದೆ. 3 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 7 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ 3 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಶ್ರೀರಕ್ಷ 607 (ದೊಂತಿಲ ಸುಂದರ ಪಿ ಗೌಡ ಮತ್ತು ಸುಮನ ಎಸ್ ದಂಪತಿ ಪುತ್ರಿ), ಚಿನ್ಮಯಿ ಎಂ ಶೆಟ್ಟಿ 591 (ದೊಂತಿಲ ಮಹಾಬಲ ಶೆಟ್ಟಿ ಮತ್ತು ಲೀಲಾವತಿ ದಂಪತಿ ಪುತ್ರಿ), ಸೌಮ್ಯ 553 (ಪಡುಬೆಟ್ಟು ಕೃಷ್ಣಪ್ಪ ಮತ್ತು ಕಲಾವತಿ ದಂಪತಿ ಪುತ್ರಿ) ಅಂಕ ಪಡೆದು ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.