- ಅಧ್ಯಕ್ಷರಾಗಿ ಸುರೇಶ್, ಕಾರ್ಯದರ್ಶಿಯಾಗಿ ಕಮಲ
ಪುತ್ತೂರು: ಅವಿಭಜಿತ ಪುತ್ತೂರು ತಾಲೂಕು ಕೊರಗ ಅಭಿವೃದ್ಧಿ ಸಂಘದ ನೂತನ ಅಧ್ಯಕ್ಷರಾಗಿ ಸುರೇಶ್ ಕೊರಗ ಕಠಾರ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಕಮಲ ಪಿಜಕ್ಕಳ ಕಡಬ ಆಯ್ಕೆಯಾಗಿದ್ದಾರೆ.
ತಾಲೂಕು ಕೊರಗ ಅಭಿವೃದ್ಧಿ ಸಂಘದ ಮಹಾಸಭೆಯು ಮೇ. ೨೦ರಂದು ದರ್ಬೆ ಕೊರಗ ಸಮುದಾಯ ಭವನದಲ್ಲಿ ನಡೆದು ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಕಮಲ ರಾಮ ನಗರ, ಜೊತೆ ಕಾರ್ಯದರ್ಶಿಯಾಗಿ ಲಲಿತ ನೀರಕಟ್ಟೆ, ಕೋಶಾಧಿಕಾರಿಯಾಗಿ ಗುರುವಮ್ಮ ಮಾನ್ಯಡ್ಕ, ಕೊರಗ ಸಂಘಗಳ ಒಕ್ಕೂಟದ ಪದಾಧಿಕಾರಿಯಾಗಿ ಬಾಬು ಕುಂಬ್ರ, ಬೇಬಿ ಒಳತ್ತಡ್ಕ, ಜಿಲ್ಲಾ ಸಮಿತಿ ಪದಾಧಿಕಾರಿಯಾಗಿ ಅಣ್ಣು ಮಾಡಾವು, ಕಮಲ ಆಯ್ಕೆ ಮಾಡಲಾಯಿತು.
ಕೊರಗ ಸಂಘಗಳ ಒಕ್ಕೂಟದ ಸದಸ್ಯ ಸಂಜೀವ ಮೂಡಬಿದ್ರೆ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಕೆಮ್ಮಾರ ಮಾರ್ಗದರ್ಶನ ನೀಡಿದರು. ಬಾಬು ಕುಂಬ್ರ ಸ್ವಾಗತಿಸಿದರು. ಕಮಲ ವಂದಿಸಿದರು.